Advertisement

Ghaziabad; ಮದುವೆಯಲ್ಲಿಅತಿಥಿಗೆ ಊಟದ ಪ್ಲೇಟ್‌ ಸ್ಪರ್ಶಿಸಿದಕ್ಕೆ ವೈಟರ್ ನನ್ನು ಕೊಂದರು!

03:36 PM Dec 07, 2023 | Team Udayavani |

ಹೊಸದಿಲ್ಲಿ: ಮದುವೆ ಮನೆಯಲ್ಲಿ ಊಟ ಮಾಡಿದ ತಟ್ಟೆಗಳನ್ನು ತೆಗೆದುಕೊಂಡು ಹೋಗುವಾಗ ಅತಿಥಿಯೊಬ್ಬರಿಗೆ ತಾಗಿದ ಕಾರಣ ವೈಟರನ್ನು ಥಳಿಸಿ ಕೊಲೆಗೈದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.

Advertisement

ನವೆಂಬರ್ 17 ರ ಸಂಜೆ ಗಾಜಿಯಾಬಾದ್‌ ನ ಪುಸ್ತಾ ರಸ್ತೆಯಲ್ಲಿರುವ ಸಿಜಿಎಸ್ ವಾಟಿಕಾ ಅತಿಥಿ ಗೃಹದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಟರ್ ಒಯ್ಯುತ್ತಿದ್ದ ತಟ್ಟೆಯು ಗೆಸ್ಟ್ ಗೆ ಸ್ಪರ್ಷವಾದಾಗ ಹೊಡೆದಾಟ ನಡೆಯಿತು. ಜಗಳದ ಸಮಯದಲ್ಲಿ ಪಂಕಜ್ ಎಂಬಾತನನ್ನು ಕೆಲವು ವ್ಯಕ್ತಿಗಳು ಕ್ರೂರವಾಗಿ ಥಳಿಸಿದ್ದಾರೆ.

ಬಳಿಕ ಆತ ಸತ್ತಿದ್ದಾನೆ ಎಂದು ಹೆದರಿದ ಆರೋಪಿಗಳು ಆತನ ಶವವನ್ನು ಕಾಡಿಗೆ ಎಸೆದಿದ್ದಾರೆ. ಮರುದಿನ ಪಂಕಜ್ ಅವರ ದೇಹವನ್ನು ಪತ್ತೆಹಚ್ಚಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಮರಣೋತ್ತರ ಪರೀಕ್ಷೆಯ ವೇಳೆ ಪಂಕಜ್ ತಲೆಯ ಮೇಲೆ ಆಳವಾದ ಗಾಯದ ಗುರುತು ಕಂಡುಬಂದಿದೆ.

ಇದನ್ನೂ ಓದಿ:ಚೀನಾಕ್ಕೆ ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿವೋ ಇಂಡಿಯಾ ವಿರುದ್ಧ ಇ.ಡಿ. ಆರೋಪಪಟ್ಟಿ ಸಲ್ಲಿಕೆ

Advertisement

ವಿಚಾರಣೆ ವೇಳೆ ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದು, ಮದುವೆ ಸ್ಥಳಕ್ಕೆ ಕೆಲಸಕ್ಕೆ ಹೋಗಿದ್ದ ಆತ ಮನೆಗೆ ವಾಪಸ್ಸಾಗಿರಲಿಲ್ಲ ಎಂದು ಆಕೆ ಹೇಳಿದ್ದಾರೆ. ಆಗ ಪಂಕಜ್ ಅತಿಥಿಗೃಹದಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದುದು ಸ್ಥಳದಲ್ಲಿ ಪಾಲುದಾರನಾಗಿದ್ದ ಮನೋಜ್ ಗುಪ್ತಾ ಎಂಬ ಗುತ್ತಿಗೆದಾರನ ಮೂಲಕ ಪೊಲೀಸರಿಗೆ ತಿಳಿಯಿತು.

ಜಗಳದ ವೇಳೆ ಮನೋಜ್ ಕೂಡಾ ಪಂಕಜ್ ಮೇಲೆ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಅಮಿತ್ ಕುಮಾರ್, ಮನೋಜ್ ಮತ್ತು ಮತ್ತೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next