Advertisement

ಮಂತ್ರಿ ಸ್ಥಾನಕ್ಕಾಗಿ ಬಿಎಸ್ ವೈ ಮೇಲೆ ಒತ್ತಡ ಹಾಕದೆ ಅವಕಾಶಕ್ಕಾಗಿ ಕಾಯಬೇಕು: ಶ್ರೀರಾಮುಲು

09:56 AM Feb 09, 2020 | keerthan |

ಹಾವೇರಿ: ಬಿಜೆಪಿಯಲ್ಲಿ ಸಚಿವರಾಗಲು ಅರ್ಹರಾಗಿರುವ ಹಿರಿಯ ಶಾಸಕರು ಬಹಳಷ್ಟಿದ್ದಾರೆ. ಅವರೆಲ್ಲ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕುವ ಬದಲಿಗೆ ಅವಕಾಶಕ್ಕಾಗಿ ಕಾಯುವುದು ಸೂಕ್ತ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಅವರು ತಮ್ಮ ಮಗಳ ಮದುವೆ ಆಹ್ವಾನ ನೀಡಲು ಶನಿವಾರ ನಗರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾಲ್ಕೈದು ಬಾರಿ ಶಾಸಕರಾದ ಹಿರಿಯರು ಮಂತ್ರಿ ಆಗಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿದೆ. ನಾನು ಅವರಲ್ಲಿ ವಿನಂತಿ ಮಾಡುವುದೇನೆಂದರೆ, ಪ್ರಸ್ತುತ ಯಡಿಯೂರಪ್ಪ ಅವರ ಮೇಲೆ ಇದಕ್ಕಾಗಿ ಒತ್ತಡ ಹಾಕಿದರೆ ಏನೂ ಪ್ರಯೋಜನ ಆಗಲ್ಲ. ಪ್ರತಿಯೊಬ್ಬರನ್ನೂ ಅವರೇ ಗುರುತಿಸುತ್ತಾರೆ. ಕಾಲಾವಕಾಶ ಕೊಡಿ. ಅವಕಾಶ ಸಿಕ್ಕಾಗ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next