Advertisement

ಹೋಟೆಲ್‍ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ: ಜ್ಯೋತಿಷಿ ಹತ್ಯೆ! ಸ್ಥಳದಲ್ಲಿ ಬಿಗುವಿನ ವಾತಾವರಣ

07:58 PM Nov 06, 2020 | sudhir |

ಕಲಬುರಗಿ: ಹೋಟೆಲ್‍ನಲ್ಲಿ ಗ್ರಾಹಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಜ್ಯೋತಿಷಿಯೊಬ್ಬ ಹಾಡುಹಗಲೇ ಕೊಲೆಯಾದ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ನಡೆದಿದೆ.

Advertisement

ಹಳಕರ್ಟಿ ಗ್ರಾಮದ ಸುರೇಶ ಭೀಮರಾವ್ ವಾಸ್ಟರ್ (58) ಕೊಲೆಯಾದ ವ್ಯಕ್ತಿ. ರಾಜಕೋಟ್ ನಲ್ಲಿ ಜ್ಯೋತಿಷ್ಯ ಹೇಳಿ ಜೀವನ ನಡೆಸುತ್ತಿರುವ ಸುರೇಶ ವಾಸ್ಟರ್, ಹಳಕರ್ಟಿ ಗ್ರಾಮದಲ್ಲಿ ಸ್ವಂತ ಜಮೀನು ಮತ್ತು ಮನೆ ಹೊಂದಿದ್ದಾರೆ. ಜಮೀನು ನೊಂದಣಿ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಕುಟುಂಬ ಸಮೇತ ಸ್ವಗ್ರಾಮಕ್ಕೆ ಆಗಮಿಸಿದ್ದರು.

ಶುಕ್ರವಾರ ಗ್ರಾಮದ ಚೌಡೇಶ್ವರ ವೃತ್ತದ ಹೋಟೆಲ್‍ವೊಂದರಲ್ಲಿ ಸುರೇಶ ಬಜ್ಜಿ ತಿನ್ನಲು ಹೋಗಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಹೋಟೆಲ್‍ನಲ್ಲಿದ್ದ ಗ್ರಾಹಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ಕಾರಣವಾಗಿದೆ. ಮಾರಾಮಾರಿಯಲ್ಲಿ ನೆಲಕ್ಕುರುಳಿದ ಸುರೇಶ ವಾಸ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅರ್ನಾಬ್ ವಿಚಾರಣೆ ಮುಂದೂಡಿಕೆ : ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಗೆ ಸುಪ್ರೀಂ ನೋಟೀಸ್

ಘಟನಾ ಸ್ಥಳಕ್ಕೆ ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು ಹಾಗೂ ವಾಡಿ ಠಾಣೆ ಪಿಎಸ್‍ಐ ವಿಜಯಕುಮಾರ ಭಾವಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಮಹೆಬೂಬ ಅಲಿ, ಸೈಯದ್ ಪಾಷಾ, ಸೈಯದ್ ಮಜರ್, ಶೋಯಲ್, ಮಹ್ಮದ್ ಶಾರುಖ್, ಸೈಯದ್ ಹಜಾರ್ ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Advertisement

ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹಳಕರ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next