Advertisement

ವಾಡಿ: ಯಂತ್ರಕ್ಕೆ ಸಿಕ್ಕು ಸಿಮೆಂಟ್ ಉತ್ಪಾದನಾ ಘಟಕದ ಕಾರ್ಮಿಕ ದುರ್ಮರಣ

07:42 PM May 19, 2022 | Team Udayavani |

ವಾಡಿ:ಅದಾನಿ ಒಡೆತನಕ್ಕೆ ಜಾರಿದ ಮೂರೇ ದಿನದಲ್ಲಿ ಪಟ್ಟಣದ ಎಸಿಸಿ ಸಿಮೆಂಟ್ ಉತ್ಪಾದನಾ ಘಟಕ ಬುಧವಾರ ಕಾರ್ಮಿಕನೋರ್ವನನ್ನು ಬಲಿ ಪಡೆದಿದೆ.ಮೃತ ದುರ್ದೈವಿ ಹೊರ ಗುತ್ತಿಗೆ ಕಾರ್ಮಿಕ ಬಸವರಾಜ ಪಾಟೀಲ (55) ಎಂದು ತಿಳಿದು ಬಂದಿದೆ.

Advertisement

ಸಿಮೆಂಟ್ ಉತ್ಪಾದನೆಗೆ ಬಳಕೆ ಮಾಡುವ ಸುಣ್ಣದ ಕಲ್ಲು, ಜಿಗಟು ಮಣ್ಣು ಹಾಗೂ ಕಲ್ಲಿದ್ದಿಲು ಕಚ್ಚಾವಸ್ತು ಬೆಲ್ಟ್ ಮೂಲಕ ಮಿಶ್ರಣ ಘಟಕಕ್ಕೆ ಸಾಗಿಸಲಾಗುತ್ತಿತ್ತು. ಬೆಲ್ಟ್ ಕತ್ತರಿಸಿ ಹಾಪಡ್ ಮುರಿದು ಬಿದ್ದಿದೆ ಎನ್ನಲಾಗಿದ್ದು, ಈ ವೇಳೆ ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಸೋನಾಬಾಯಿ ಬಡಾವಣೆಯ ನಿವಾಸಿ ಬಸವರಾಜ ಮೇಲೆ ಕಲ್ಲುಗಳ ರಾಶಿ ಬಿದ್ದಿವೆ. ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಂಪನಿ ಅಧಿಕಾರಿಗಳು, ಕಾರ್ಮಿಕ ಮುಖಂಡರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next