Advertisement

ವಾಡಿ : ಸ್ಕೂಟಿಯಲ್ಲಿ ಬಂದು ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ಯುವತಿ

06:24 PM Jul 20, 2022 | Team Udayavani |

ವಾಡಿ : ಕಾಲೇಜು ಯುವತಿಯೋರ್ವಳು ಶಹಾಬಾದ ಸಮೀಪದ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.

Advertisement

ಭಾಗ್ಯಶ್ರೀ (21) ಎಂಬ ಯುವತಿಯೆ ಆತ್ಮಹತ್ಯೆ ಮಾಡಿಕೊಂಡ ಯುವತಿ.

ಕೆಎ05ಎಲ್-ಎ2964 ಸಂಖ್ಯೆಯ ಸ್ಕೂಟಿ ವಾಹನದಲ್ಲಿ ನದಿ ಸೇತುವೆ ಮೇಲೆ ಬಂದ ಯುವತಿ, ಅವಸರದಲ್ಲಿ ಸ್ಕೂಟಿ ನಿಲ್ಲಿಸಿದ ತಕ್ಷಣವೇ ನದಿಗೆ ಜಿಗಿದಿದ್ದಾಳೆ. ಓಡಿ ಬಂದು ನೋಡುವಷ್ಟರಲ್ಲೇ ಯುವತಿ ನೀರಿನಲ್ಲಿ ಮುಳುಗಿದ್ದಳು ಎಂದು ಪ್ರತ್ಯಕದರ್ಷಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಹಾಬಾದ ನಗರ ಠಾಣೆಯ ಪೋಲೀಸರು, ಬೈಕ್ ಸಂಖ್ಯೆಯಿಂದ ನದಿಗೆ ಹಾರಿದ ಯುವತಿ ಭಾಗ್ಯಶ್ರೀ ಹೊಸಳ್ಳಿ ಎಂಬುದು ಖಚಿತವಾಗಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ನೀರಿನೊಳಗೆ ಕಾಣೆಯಾಗಿರುವ ಯುವತಿಯ ಶವ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : ಸಂತೋಷ್ ಪಾಟೀಲ್‌ ಆತ್ಮಹತ್ಯೆ ಕೇಸ್: ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next