Advertisement

Crime: ವಾಡಿ: ಪ್ರಿಯಾಂಕ್ ಪ್ರತಿಸ್ಪರ್ಧಿ ಮಣಿಕಂಠ ಮೇಲೆ ಹಲ್ಲೆ

09:17 AM Nov 19, 2023 | Team Udayavani |

ವಾಡಿ (ಚಿತ್ತಾಪುರ): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಮಣಿಕಂಠ ರಾಠೋಡ್ ಮೇಲೆ ನ.18ರ ಶನಿವಾರ ತಡರಾತ್ರಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಶಹಾಬಾದ ತಾಲೂಕಿನ ಕಾಗಿಣಾ ಸೇತುವೆ ಬಳಿ ನಡೆದಿದೆ.

Advertisement

ಮಾಲಗತ್ತಿ ಸಮೀಪದ ತಮ್ಮ ತೋಟದ ಮನೆಯಿಂದ ರಾತ್ರಿ 1 ಗಂಟೆಗೆ ಕಲಬುರಗಿ ಮನೆಯತ್ತ ಹೊರಟಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಕಾರನ್ನು ದುಷ್ಕರ್ಮಿಗಳು ಸೇತುವೆ ಹತ್ತಿರ ತಡೆದು ಮದ್ಯದ ಬಾಟಲಿಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ತಲೆಗೆ ಮತ್ತು ದೇಹಕ್ಕೆ ಭಾರಿ ಪ್ರಮಾಣದಲ್ಲಿ ಪೆಟ್ಟಾಗಿದೆ. ತಲೆಯಿಂದ ರಕ್ತ ಸುರಿದು ಮಣಿಕಂಠ ನೆಲಕ್ಕೆ ಬಿದ್ದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಜತೆಗಿದ್ದವರು ತಕ್ಷಣ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಣಿಕಂಟನ ಮೇಲೆ ಮಧ್ಯರಾತ್ರಿ ಹಲ್ಲೆಗೆ ಹೊಂಚು ಹಾಕಿದವರು ಯಾರು ಎಂಬುದು ಹಲ್ಲೆಗೊಳಗಾದ ಮಣಿಕಂಠ ರಾಠೋಡ ಹೇಳಬೆಕು ಅಥವಾ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next