Advertisement

ವಾಡಿ: ತರ್ಕಸಪೇಟೆ ದರ್ಗಾ ಜಾತ್ರೆ ರದ್ದು;ಶಾಂತಿ ಸಭೆ

04:24 PM Jan 15, 2022 | Team Udayavani |

ವಾಡಿ: ಇದೇ ಜ.19 ಹಾಗೂ 20 ರಂದು ಎರಡು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದ್ದ ನಾಲವಾರ ವಲಯದ ತರ್ಕಸಪೇಟೆ ಗ್ರಾಮದ ಶಾಪೀರ್ ಅಲಿ ಘೇಪಿರಲ್ಲಿ ದರ್ಗಾ ಜಾತ್ರೆ ರದ್ದುಪಡಿಸಲಾಗಿದೆ.

Advertisement

ಈ ಕುರಿತು ಶನಿವಾರ ವಾಡಿ ಪೊಲೀಸ್ ಠಾಣೆಯಲ್ಲಿ ಜಾತ್ರಾಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಸಹಭಾಗಿತ್ವದಲ್ಲಿ ಶಾಂತಿ ಸಭೆ ನಡೆಸಿದ ಪಿಎಸ್ ಐ ವಿಜಯಕುಮಾರ ಭಾವಗಿ, ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ನ ರೂಪಾಂತರಿ ಒ ಮಿಕ್ರಾನ್ ಚೈನ್ ಬ್ರೇಕ್ ಮಾಡಲು ಸರಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪರಿಣಾಮ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಯಾವೂದೇ ಜಾತ್ರೆ, ಸಭೆ ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಆದ್ದರಿಂದ ತರ್ಕಸಪೇಟೆ ಗ್ರಾಮದ ದರ್ಗಾ ಜಾತ್ರೆ ನಡೆಸುವಂತಿಲ್ಲ. ಅಲ್ಲದೆ ಈ ಎರಡು ದಿನಗಳಲ್ಲಿ ಭಕ್ತರು ದರ್ಗಾ ಪ್ರವೇಶ ಮಾಡಬಾರದು. ಮನೆಯಲ್ಲೇ ದೇವರಿಗೆ ಪೂಜಿಸುವ ಮೂಲಕ ಭಕ್ತಿ ಸಮರ್ಪಿಸಬೇಕು ಎಂದು ಸೂಚಿಸಿದ್ದಾರೆ.

ಕಾನೂನು ಉಲ್ಲಂಘಿಸಿ ದರ್ಗಾ ಜಾತ್ರೆ ನಡೆಸುವುದಾಗಲಿ ಅಥವ ಭಕ್ತರು ದರ್ಗಾ ಪ್ರವೇಶಕ್ಕೆ ಮುಂದಾದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next