Advertisement

ಪರಸ್ಪರ ಮಾಸ್ಕ್ ಕಟ್ಟಿದ ವಧು-ವರ

05:11 PM May 28, 2020 | Naveen |

ವಾಡಿ: ಕೋವಿಡ್ ಎಫೆಕ್ಟ್ ಜನತೆಗೆ ಸಾಕಷ್ಟು ನೀತಿ-ನಿಯಮ ಕಲಿಸುತ್ತಿದೆ. ಮದುವೆಯಲ್ಲಿ ವರ ವಧುವಿಗೆ ಮಂಗಳಸೂತ್ರ ಕಟ್ಟಿ ವಿವಾಹವಾಗುವುದು ಸಂಪ್ರದಾಯ. ಆದರೆ ಇಲ್ಲೊಂದು ಜೋಡಿ ಪರಸ್ಪರ ಮುಖಕ್ಕೆ ಮಾಸ್ಕ್ ಕಟ್ಟಿದ ನಂತರ ತಾಳಿ ಕಟ್ಟಿ ಹಸೆಮಣೆ ಏರಿತು.

Advertisement

ಪಟ್ಟಣದ ಸೇವಾಲಾಲ ನಗರ ತಾಂಡಾದಲ್ಲಿ ಬುಧವಾರ ಬೆಳಗ್ಗೆ ಸೆಕ್ಟ್ರಲ್‌ ಮ್ಯಾಜಿಸ್ಟ್ರೇಟ್‌ ವಿಠ್ಠಲ ಹಾದಿಮನಿ ಸಮ್ಮುಖದಲ್ಲಿ ಕೇವಲ 25 ಕುಟುಂಬದ ಸದಸ್ಯರ ಮಧ್ಯೆ ಬಂಜಾರಾ ಸಮುದಾಯದ ಯುವ ಜೋಡಿಯೊಂದು ಸರಳ ಮದುವೆಯಾಗಿ ಸರಕಾರದ ಆದೇಶ ಪಾಲಿಸಿತು. ಸ್ಥಳೀಯ ವೀರು ದೇವಾ ಚವ್ಹಾಣ ಹಾಗೂ ಶಹಾಪುರ ತಾಲೂಕಿನ ವರ್ಕನಳ್ಳಿ ಧರ್ಮಾನಾಯಕ ತಾಂಡಾದ ಕಾವೇರಿ ರಾಠೊಡ ಮದುವೆಯಾದವರು. ಶಾಮಿಯಾನ ಹಾಕದೆ, ಭಾಜಾ-ಭಜಂತ್ರಿ ಬಾರಿಸದೆ, ಮನೆ ಎದುರು ಸರಳವಾಗಿ ಮದುವೆಯಾಗಿ ಮಾದರಿಯಾದರು. ಬಂಜಾರಾ ಸಮಾಜದ ಯುವ ಮುಖಂಡ ರವಿ ಕಾರಬಾರಿ, ಕಾನ್‌ ಸ್ಟೇಬಲ್‌ ಬಸಲಿಂಗಪ್ಪ ಮುದಗಲ್‌ ಇದ್ದರು.

ಇನ್ನೊಂದು ಸರಳ ವಿವಾಹ: ಬುಧವಾರ ಪಟ್ಟಣದ ಹನುಮಾನ ನಗರದಲ್ಲಿ ಮತ್ತೂಂದು ಸರಳ ವಿವಾಹ ನೆರವೇರಿದೆ. ವಧು ಆರತಿ ರಾಠೊಡ ಹಾಗೂ ವರ ಪ್ರದೀಪ ಪವಾರ ಅವರ ಮದುವೆ ಸೇಕ್ಟ್ರಲ್‌ ಮ್ಯಾಜಿಸ್ಟ್ರೇಟ್‌ ವಿಠ್ಠಲ ಹಾದಿಮನಿ, ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಹಾಗೂ ಬಂಜಾರಾ ಮುಖಂಡರ ಸಮ್ಮುಖದಲ್ಲಿ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next