Advertisement

ಒಡೆಯರ್‌, ಸರ್‌ಎಂವಿ ಪ್ರತಿಮೆ ನಿರ್ಮಿಸಿ

05:27 AM May 30, 2020 | Lakshmi GovindaRaj |

ಮೈಸೂರು: ಸಚಿವ ರಮೇಶ್‌ ಜಾರಕಿಹೊಳಿ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ಅರಮನೆಯಲ್ಲಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

Advertisement

ಬಳಿಕ ಮಾತನಾಡಿದ ಸಚಿವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ  ಒಡೆಯರ್‌ ಮತ್ತು ಅಂದು ದಿವಾನರಾಗಿದ್ದ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಕೆಆರ್‌ಎಸ್‌ನ ದಕ್ಷಿಣ ದ್ವಾರದ ಮುಂಭಾಗ ನಿರ್ಮಿಸಲು 8.50ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು ಶೀಘ್ರವೇ ಪೂರ್ಣ ಗೊಳ್ಳಿಲಿದೆ ಎಂದು  ಸಚಿವ ಜಾರಕಿ ಹೊಳಿ ತಿಳಿಸಿದರು. ದೇಶದ ಬೆನ್ನೆಲುಬು ರೈತನ ಹಿತ ಕಾಪಾಡುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ವಿಶೇಷಾಧಿಕಾರಿ ರುದ್ರಯ್ಯ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌.ಎನ್‌. ಶಂಕರ್‌, ಕಾವೇರಿ ನೀರಾವರಿ ನಿಗಮದ ಎಂಡಿ ಜಯ ಪ್ರಕಾಶ್‌, ಅರಮನೆ ಮಂಡಳಿಯ ಸುಬ್ರಹ್ಮಣ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next