Advertisement

ವೈಟಿಪಿಎಸ್‌ ಲೋಕಾರ್ಪಣೆ 

08:15 AM Feb 28, 2018 | Team Udayavani |

ರಾಯಚೂರು: ಸಮೀಪದ ಯರಮರಸ್‌ ಸೂಪರ್‌ ಕ್ರಿಟಿಕಲ್‌ ಥರ್ಮಲ್‌ ಪವರ್‌ ಸ್ಟೇಶನ್‌ ಅನ್ನು ಸಿಎಂ ಸಿದ್ದರಾಮಯ್ಯ ಮಂಗಳವಾರ ಅ ಧಿಕೃತವಾಗಿ ಲೋಕಾರ್ಪಣೆ ಗೊಳಿಸಿದರು. 13,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ 800 ಮೆಗಾವ್ಯಾಟ್‌ ಸಾಮರ್ಥ್ಯದ ಎರಡು ಕೇಂದ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕೇಂದ್ರ ಇದಾಗಿದ್ದು, ಕಡಿಮೆ ಕಲ್ಲಿದ್ದಲಿನಲ್ಲಿ ಹೆಚ್ಚು ವಿದ್ಯುತ್‌ ಉತ್ಪಾದಿಸಬಹುದು. ಆರ್‌ಟಿಪಿಎಸ್‌ 1,720 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ವೈಟಿಪಿಎಸ್‌ 1600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಎರಡೂ  ಕೇಂದ್ರಗಳಿಂದ 3,320 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಬಹುದಾಗಿದೆ. ಕಳೆದ ವರ್ಷ ಎರಡು ಘಟಕಗಳನ್ನು ವಾಣಿಜ್ಯಿಕ ಉತ್ಪಾದನೆಗೆ ಘೋಷಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಕರ ಪುಸ್ತಕದಲ್ಲಿ ಶುಭ ಕೋರಿ ಹಸ್ತಾಕ್ಷರ ನೀಡಿದರು. 

Advertisement

ವೈಟಿಪಿಎಸ್‌ ಅನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಕೆಳಗೆ ಮತ್ತು ಮೇಲೆ ಕೆಂಪು ನೆಲಹಾಸು ಹಾಸುವ ಮೂಲಕ ಸಿಎಂಗೆ ಸ್ವಾಗತ ಕೋರಲಾಯಿತು. ಬಳಿಕ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾ ಯಿತು. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆರ್‌ ಟಿಪಿಎಸ್‌, ವೈಟಿಪಿಎಸ್‌ಗೆ ನೀರು ಸಂಗ್ರಹಿಸುವ ಉದ್ದೇಶದಿಂದ ನಿರ್ಮಿಸಿದ ಗುರ್ಜಾಪುರ ಬ್ಯಾರೇಜ್‌ ಲೋಕಾರ್ಪಣೆ ಮಾಡಿದರು. ಇಂಧನ ಸಚಿವ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತವಾರಿ ಸಚಿವ ತನ್ವೀರ್‌ ಸೇs…, ಕೆಪಿಸಿ ವ್ಯವಸ್ಥಾಪಕ 
ನಿರ್ದೇಶಕ ಜಿ.ಕುಮಾರ ನಾಯಕ್‌, ಶಾಸಕ ತಿಪ್ಪರಾಜ್‌ ಹವಾಲ್ದಾರ್‌ ಇದ್ದರು. ರಾಯಚೂರು ಸಮೀಪದ ಯರಮರಸ್‌ ಸೂಪರ್‌  ಕ್ರಿಟಿಕಲ್‌ ಶಾಖೋತ್ಪನ್ನ ಕೇಂದ್ರವನ್ನು ಸಿಎಂ ಲೋಕಾರ್ಪಣೆಗೊಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next