Advertisement

Kerala: ಶತಮಾನೋತ್ಸವಕ್ಕೆ ಕಾಲಿಟ್ಟಿ ವಿ.ಎಸ್‌.ಅಚ್ಯುತಾನಂದನ್‌

11:17 PM Oct 20, 2023 | Team Udayavani |

ತಿರುವನಂತಪುರ: ಸಿಪಿಐ ಇತಿಹಾಹಸದಲ್ಲೇ ಅತ್ಯಂತ ಪ್ರಸಿದ್ಧ ನಾಯಕನೆಂಬ ಖ್ಯಾತಿಗೆ ಪಾತ್ರರಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ, ರಾಜಕೀಯ ಹಿರಿಯ ಮುತ್ಸದ್ಧಿ ವಿ.ಎಸ್‌. ಅಚ್ಯುತಾನಂದನ್‌ ಅವರು ಶುಕ್ರವಾರ ತಮ್ಮ 100ನೇ ಜನ್ಮದಿನೋತ್ಸವಕ್ಕೆ ಕಾಲಿಟ್ಟಿದ್ದಾರೆ.

Advertisement

ಕುಟುಂಬದೊಂದಿಗೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಅವರನ್ನು ಜನರು ನೇರವಾಗಿ ಭೇಟಿ ಮಾಡಿ ಶುಭಕೋರಲು ಅವಕಾಶ ನೀಡಲಾಗಿಲ್ಲ. ಆದಾಗ್ಯೂ ಅವರ ಅಭಿಮಾನಿಗಳು ರಾಜ್ಯದ್ಯಂತ ವಿಭಿನ್ನವಾಗಿ ಶತಮಾನೋತ್ಸವವನ್ನು ಆಚರಿಸಿದ್ದಾರೆ.

ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌, ಸಿಎಂ ಪಿಣರಾಯಿ ವಿಜಯನ್‌, ಕಾಂಗ್ರೆಸ್‌ನ ನಾಯಕ ಜೈರಾಮ್‌ ರಮೇಶ್‌ ಸೇರಿದಂತೆ ಹಲವಾರು ಗಣ್ಯರು ಶುಭಕೋರಿದ್ದಾರೆ.”ಕಾಮ್ರೇಡ್‌ ವಿ.ಎಸ್‌” ಎಂದೇ ಖ್ಯಾತರಾದ ವೆಲ್ಲಿಕ್ಕಕತ್ತು ಶಂಕರನ್‌ ಅಚ್ಯುತಾನಂದನ್‌ ಪಕ್ಷಕಂಡ ಅತ್ಯಂತ ಪ್ರಭಾವೀ ನಾಯಕರಲ್ಲೊಬ್ಬರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next