Advertisement

ಮತದಾನ ಜಾಗೃತಿಗೆ ಬಂದಿದೆ ಕಿರುಚಿತ್ರ

07:05 AM May 04, 2018 | |

ಹುಬ್ಬಳ್ಳಿ: ಮತಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಕಡ್ಡಾಯ ಮತದಾನ ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶ ಹೊತ್ತ ಕಿರುಚಿತ್ರ
ವೊಂದನ್ನು ನಿರ್ಮಿಸುವ ಮೂಲಕ ಸಹೋದರರಿಬ್ಬರು ಗಮನ ಸೆಳೆದಿದ್ದಾರೆ. “ಒಂದು ಮತದ ಸುತ್ತ’ ಕಿರುಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿನ ಕೃಷ್ಣ ಪಂತ ಹಾಗೂ ರಾಘವೇಂದ್ರ ಪಂತ ಎಂಬ ಸಹೋದರರು ರವಿರತ್ನ ಕ್ರಿಯೇಶನ್ಸ್‌ ಅಡಿಯಲ್ಲಿ 14 ನಿಮಿಷಗಳ ಈ ಕಿರುಚಿತ್ರ ನಿರ್ಮಿಸಿದ್ದು, ಇದು ಮತದಾನ ಹಕ್ಕಿನ ಮಹತ್ವವನ್ನು ಸಾರಿ ಹೇಳುತ್ತಿದೆ.

Advertisement

ಕಿರುಚಿತ್ರದಲ್ಲಿ ರಂಗಾಯಣ ಮಾಜಿ ನಿರ್ದೇಶಕ, ರಂಗಕರ್ಮಿ ಸುಭಾಸ ನರೇಂದ್ರ, ಯುವಕರಿಗೆ ಮತದಾನ ಮಹತ್ವದ ಮನನ ಮಾಡುವ ಉಪನ್ಯಾಸಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಪ್ರಕಾಶ ಧುಳೆ, ಕೇಶವ ಕರ್ಜಗಿ ಸೇರಿ ಸುಮಾರು 15 ಕಲಾವಿದರು ನಟಿಸಿದ್ದಾರೆ. ಶಿವಾನಿ ಅಕ್ಕಿ ಅವರ ಹಿನ್ನೆಲೆ ಗಾಯನವಿದೆ. ನಾಲ್ಕೈದು ದಿನಗಳಲ್ಲಿ ಒಟ್ಟಾರೆಯಾಗಿ ಕಿರುಚಿತ್ರದ ನಿರ್ಮಾಣ
ಕಾರ್ಯ ಮುಗಿಸಲಾಗಿತ್ತು.

ಮೇ 2 ರಂದು ಯುಟ್ಯೂಬ್‌ನಲ್ಲಿ ಕಿರುಚಿತ್ರ ಬಿಡುಗಡೆಯಾಗಿದ್ದು,ಇದುವರೆಗೆ ಸುಮಾರು 3,200ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಮತದಾನ ದಿನ ರಜೆ ಇರುವುದರಿಂದ ಅಕ್ಷರವಂತರು ಹಾಗೂ ನಗರವಾಸಿಗಳು ಮತದಾನ ಮಾಡದೆ ರಜೆ ಮಜಾ ಸವಿಯಲು ಬೇರೆ ಕಡೆ ಹೋಗುತ್ತಿರುವುದು ಸಾಮಾನ್ಯ. ಅದೇ ರೀತಿ ಯಾರಿಗೆ ಮತ ಹಾಕಿದರೆ ಪ್ರಯೋಜನ ಏನಿದೆ. ಯಾರು ಬಂದು
ಮಾಡುವುದಾದರೂ ಏನು. ಎಲ್ಲರೂ ಅವರೇ ಎಂಬ ಮನೋಭಾವ ಯುವಕರಲ್ಲಿ ಹೆಚ್ಚುತ್ತಿದ್ದು, ಮತದಾನಕ್ಕೆ ನಿರಾಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿರುಚಿತ್ರದ ಮೂಲಕ ಜಾಗೃತಿ ಮೂಡಿಸಲು, ಯುವಕರು ಹಾಗೂ ವಿಶೇಷವಾಗಿ ಮತದಾನ ದಿನ ರಜೆ ಮಜಾ ಸವಿಯಲು ತೆರಳುವವರನ್ನು ಮತದಾನಕ್ಕೆ ಆಕರ್ಷಿಸಲು ಯತ್ನಿಸಲಾಗಿದೆ. ನಾವು ಯಾವುದೇ ಪಕ್ಷ-ವ್ಯಕ್ತಿ ಪರ ಪ್ರಚಾರ ಸಂದೇಶ ನೀಡಿಲ್ಲ.
ಬದಲಾಗಿ ಯಾವುದೇ ಪಕ್ಷ ಅಥವಾ ಯಾವುದೇ ವ್ಯಕ್ತಿಯಾಗಲಿ ಒಟ್ಟಾರೆ ಮತದಾನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹುದೊಡ್ಡ ಮೌಲ್ಯ ಹಾಗೂ ಮಹತ್ವ ಇದೆ ಎಂಬ ಸಂದೇಶವನ್ನು ಒಂದು ಮತದ ಸುತ್ತ ಕಿರುಚಿತ್ರ ನೀಡುತ್ತಿದೆ ಎಂಬುದು ಕಿರುಚಿತ್ರದ ನಿರ್ದೇಶಕ ರಾಘವೇಂದ್ರ ಪಂತ ಅವರ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next