Advertisement

ನಗರ ಸ್ಥಳೀಯ ಸಂಸ್ಥೆಗಳಿಂದ ಮತದಾನ ಜಾಗೃತಿ

01:32 PM Mar 24, 2019 | Team Udayavani |

ಕೋಲಾರ: ಮಾಲೂರು ಪಟ್ಟಣದಲ್ಲಿ ತಾಲೂಕು ಸ್ವೀಪ್‌ ಸಮಿತಿಯಿಂದ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯಲ್ಲಿ ಇಒ, ಬಿಇಒ, ಮುಖ್ಯಾ ಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳು, ತಾಲೂಕಿನ ಎಲ್ಲಾ ಇಲಾಖೆಗಳ ಸಿಬ್ಬಂದಿ ಹಾಗೂ ಅ ಧಿಕಾರಿಗಳು ಭಾಗವಹಿಸಿದ್ದರು.

Advertisement

ಬಂಗಾರಪೇಟೆ ಪುರಸಭೆ ಹಾಗೂ ಸ್ವೀಪ್‌ ಸಮಿತಿಯಿಂದ ಕೆಸಿ ರೆಡ್ಡಿ ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಮತ್ತು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಪುರಸಭೆ ಕಚೇರಿಯ ಸಮುದಾಯ ಸಂಘಟನಾ ಧಿಕಾರಿ ಎಸ್‌.ಎಂ ವೆಂಕಟೇಶ್‌ ಉಪನ್ಯಾಸ ನೀಡಿದರು.

ಮುಖ್ಯಾ ಧಿಕಾರಿ ವಿ.ಶ್ರೀಧರ್‌ ಪ್ರತಿಜ್ಞಾವಿ ಧಿ ಬೋ ಧಿಸಿದರು. ಕೆ.ಸಿ.ರೆಡ್ಡಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಮುನಿಶಾಮಪ್ಪ ಮತದಾನ ಮಾಡುವ ಬಗ್ಗೆ ಅರಿವನ್ನು ಮೂಡಿಸಿದರು. ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರು ಮತ್ತು ಬೋಧಕರು ಸೇರಿ 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next