Advertisement

ಶಾಸಕರೆಲ್ಲಿ ಎನ್ನುತ್ತಿರುವ ಮತದಾರರು

04:25 AM Apr 03, 2019 | Team Udayavani |

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ
ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಎಸ್‌.ಉಗ್ರಪ್ಪ ಅವರಿಗೆ ಹೊಸದೊಂದು ಸಮಸ್ಯೆ ಎದುರಾಗಿದೆಯಂತೆ. ಪ್ರಚಾರಕ್ಕೆ ಹೋದ ವೇಳೆ ಮುಜುಗರದ ಅನುಭವ ಆಗುತ್ತಿದೆಯಂತೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಉಗ್ರಪ್ಪ ಅವರು ಕಂಪ್ಲಿಗೆ ಹೋದರೆ ನಮ್ಮ ಶಾಸಕರೆಲ್ಲಿ ಎಂದು ಅಲ್ಲಿನ ಮತದಾರರು ಕೇಳುತ್ತಿದ್ದಾರಂತೆ. ಶಾಸಕರ ಜತೆ ಬಂದು ಮತ ಕೇಳಿ ಎಂದು ಕಂಡೀಷನ್‌ ಹಾಕುತ್ತಿದ್ದಾರಂತೆ. ಹೀಗಾಗಿ, ಉಗ್ರಪ್ಪ ಅವರು ಆ ಕ್ಷೇತ್ರದ ಶಾಸಕರಿಗೆ ಜಾಮೀನು ದೊರೆತು ಕ್ಷೇತ್ರಕ್ಕೆ ಬರುವಂತಾಗಲಿ  ಎಂದು ಕಾಯುತ್ತಿದ್ದಾರಂತೆ. ಮತ್ತೂಂದೆಡೆ, ವಿಜಯನಗರ ಕ್ಷೇತ್ರದ ಕಡೆ ಹೋದರೆ ಹಲ್ಲೆಗೊಳಗಾಗಿರುವ ಶಾಸಕರ ಬೆಂಬಲಿಗರು ನಮ್ಮ ಶಾಸಕರಿಗೆ ಅವಮಾನ ಮಾಡಲಾಗಿದೆ ಎಂದು ಮುನಿಸಿಕೊಂಡಿದ್ದಾರಂತೆ. ಉಪ ಚುನಾವಣೆಯಲ್ಲಿ ಎಲ್ಲ ನಾಯಕರು ಬಂದಿದ್ದರು, ಆದರೆ, ಈ ಬಾರಿ ಕೆಲವು ನಾಯಕರು ಅಬ್ಸೆಂಟ್‌ ಆಗಿರುವುದು ಉಗ್ರಪ್ಪ ಟೆನ್ಶನ್‌ಗೆ ಕಾರಣವಾಗಿದೆಯಂತೆ. ಉಗ್ರಪ್ಪರ ಈ ಟೆನ್ಶನ್‌ ನೋಡಿ, ಬಿಜೆಪಿ ನಾಯಕರು ಒಳಗೊಳಗೇ ಸಂತಸ ಪಡುತ್ತಿದ್ದಾರಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next