Advertisement

ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಿ

02:49 PM May 07, 2018 | Team Udayavani |

ಹುಣಸೂರು: ಮತದಾನ ಜಾಗೃತಿಗಾಗಿ ಸ್ವೀಪ್‌ ಸಮಿತಿ ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನದಡಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

Advertisement

ಹುಣಸೂರು ತಾಪಂ ಕಚೇರಿ ಹೊರಾವರಣದಲ್ಲಿ ದಿಶಾ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿದ್ದ ಸ್ಪರ್ಧೆಯಲ್ಲಿ  42 ಮಹಿಳೆಯರು ಭಾಗವಹಿಸಿ ಬಣ್ಣ-ಬಣ್ಣದ ರಂಗೋಲಿ ಬಿಡಿಸಿದರು. ಉತ್ತಮ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಬಹುಮಾನ ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಪ್ರಮಾಣ ಸ್ವೀಕಾರ: ಇದೇ ಸಂದರ್ಭದಲ್ಲಿ ಸೇವಾ ಮನೋಭಾವವಿರುವ, ಸರ್ವರ ಕ್ಷೇಮಾಭಿವೃದ್ಧಿ ಅಭ್ಯರ್ಥಿಗೆ ಆಸೆ ಆಮಿಷಗಳಿಗೆ ಬಲಿಯಾಗದೆ ಕಡ್ಡಾಯವಾಗಿ ಮತ ಚಲಾಯಿಸುತ್ತೇವೆಂದು ಮಹಿಳೆಯರು ಹಾಗೂ ತಾಪಂ ಇಒ ಕಷ್ಣಕುಮಾರ್‌, ಸಂಜೀವಿನಿ ಯೋಜನೆಯ ಮುಖ್ಯಸ್ಥೆ ಮಂಜುಳಾ ಸೇರಿದಂತೆ ಇತರರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಮತದಾನ ಹೆಚ್ಚಲಿ: ಚುನಾವಣಾ ಆಯೋಗದ ಸೂಚನೆಯಂತೆ ಸ್ವೀಪ್‌ ಸಮಿತಿ ವತಿಯಿಂದ ಈಗಾಗಲೇ ಹಳ್ಳಿಗಳಲ್ಲಿ ಸೈಕಲ್‌-ಬೈಕ್‌, ಜಾಗೃತಿ ಜಾಥಾಗಳು ನಡೆದಿವೆ. ಮತದಾನವನ್ನು ಹಬ್ಬದಂತೆ ಆಚರಿಸಲು ವಿಶೇಷ ಕಾರ್ಯಕ್ರಮ ರೂಪಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದರು. ಈ ಸಂದರ್ಭದಲ್ಲಿ ದಿಶಾ ಫೌಂಡೇಶನ್‌ನ ಬೋರಪ್ಪ, ನಾಗೇಂದ್ರ, ಪಿಡಿಒ ನರಹರಿ, ಸಂಜೀವಿನಿ ಯೋಜನೆಯ ಪ್ರವೀಣ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next