Advertisement

Mandya ವಿವೇಕಾನಂದರ ಜಯಂತಿ ಮಾಡದ ಆರೆಸ್ಸೆಸ್‌: ಭಗವಾನ್‌

07:59 PM Dec 11, 2023 | |

ಮಂಡ್ಯ: ಆರೆಸ್ಸೆಸ್‌ ರಾಷ್ಟ್ರೀಯ ಸುಳ್ಳುಗಾರರ ಸಂಸ್ಥೆ. ಸ್ವಾಮಿ ವಿವೇಕಾನಂದರು ನಾನು ಹಿಂದೂ ಅಲ್ಲ. ಬೌದ್ಧ ಎಂದು ಹೇಳಿಕೊಂಡಿದ್ದರು. ಆದರೆ ಇತಿಹಾಸದಲ್ಲಿ ಇದನ್ನು ಮರೆಮಾಚಿದರು ಎಂದು ಚಿಂತಕ ಹಾಗೂ ಸಾಹಿತಿ ಪ್ರೊ| ಕೆ.ಎಸ್‌.ಭಗವಾನ್‌ ಹೇಳಿದರು.

Advertisement

ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಡಾ| ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿಬ್ಟಾಣ ದಿನದ ಅಂಗವಾಗಿ ನಡೆದ ದಲಿತ, ಶೋಷಿತ ಸಮುದಾಯದ ಅಭ್ಯುದಯ, ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರನ್ನು ಹಿಂದೂ ಧರ್ಮದ ಪ್ರತಿಪಾದಕರೆಂದು ಬಿಂಬಿಸಿ ಆರಾ ಧಿಸಲಾಗುತ್ತಿತ್ತು. ಆದರೆ ಅವರು ಹಿಂದೂ ಧರ್ಮದ ಕಟು ಟೀಕಾಕಾರರು ಎಂಬುದು ಗೊತ್ತಾದ ಮೇಲೆ ಆರೆಸ್ಸೆಸ್‌ ವಿವೇಕಾನಂದರ ಜಯಂತಿ ಆಚರಿಸುವುದನ್ನು ನಿಲ್ಲಿಸಿದೆ ಎಂದರು.

ವಿವೇಕಾನಂದರು ಹಿಂದೂ ಧರ್ಮದ ಕಟು ಟೀಕಾಕಾರರಾಗಿದ್ದರು. ನನ್ನದು ಸಂಕುಚಿತ ಹಿಂದೂ ಧರ್ಮವಲ್ಲ. ಬದಲಾಗಿ ಮನುಷ್ಯ ಧರ್ಮ ಎಂದು ಸಾರಿದ್ದರು. ಇಂತಹ ವಿಚಾರವನ್ನು ಇತಿಹಾಸದಲ್ಲಿ ಮರೆಮಾಚಿರುವುದು ದುರಂತ. ಭಾರತದಲ್ಲಿ ಬೌದ್ಧ ಧರ್ಮ ಪ್ರಬಲವಾಗಿತ್ತು. ಅದರ ವಿರುದ್ಧ ದಮನಕಾರಿ ನೀತಿ ಅನುಸರಿಸಲಾಯಿತು. ಬೌದ್ಧ ಧರ್ಮದ ಇತಿಹಾಸ ಮರೆಮಾಚಲು ಸಾವಿರ ವರ್ಷಗಳ ಇತಿಹಾಸವನ್ನೇ ದೇಶದಲ್ಲಿ ಮರೆಮಾಚಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next