Advertisement

ವಿವೇಕಾನಂದರು ಯುವಕರಿಗೆ ಅನುಕರಣೀಯವಾಗಲಿ

09:33 PM Mar 26, 2021 | Team Udayavani |

ಔರಾದ: ಯುವಕರು ಜಾಗೃತರಾದರೆ ಮಾತ್ರ ದೇಶದ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದಕ್ಕೆ ವೀರಸನ್ಯಾಸಿ ವಿವೇಕಾನಂದರೇ ನಮಗೆ ಅನುಕರಣೀಯ ಎಂದು ನೆಹರು ಯುವ ಕೇಂದ್ರದ ಅಧಿಕಾರಿ ಮಯೂರಕುಮಾರ್‌ ಅಭಿಪ್ರಾಯಪಟ್ಟರು.

Advertisement

ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಯುವಕರ ಜೀವನ ಸಮಯ ಪ್ರಜ್ಞೆ ಭಾರತೀಯ ಪರಂಪರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ದೇಶದ ಅನೇಕ ಸತ್ಯವಾದ ಘಟನೆಗಳು ಮೆಲುಕು ಹಾಕಿ ಸಂತರ, ಯುಗ ಪುರುಷರ ಜೀವನ ಶೈಲಿ ನಮ್ಮಲ್ಲಿ ಹಾಸು ಹೊಕ್ಕಾಗಬೇಕು. ಯುವಕರಾದವರು ಗುರಿ ತಲುಪಲು ಜ್ಞಾನವೇ ಮುಖ್ಯ ಭೂಮಿಕೆ ಆಗಲಿದೆ ಎಂದರು. ಸ್ಥಳೀಯ ಶಾಹೀನ್‌ ಕಾಲೇಜಿನ ಪ್ರಾಚಾರ್ಯ ಗಣೇಶ್‌ ಜೋಜನಾ, ಐಟಿಐ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿದರು.

ಈ ಸಂದರ್ಭದಲ್ಲಿ ಬಾಬುರಾವ ಸೋನಾರ, ಅನಿತಾ ರಾಠೊಡ, ದಯಾನಂದ ಬಂಬುಳಗೆ, ಚಂದ್ರಕಾಂತ ಹುಲ್ಸುರೆ, ದಯಾನಂದ, ಸುಜಾತ ಗೋವಿಂದ, ರತ್ನದೀಪ ಕಸ್ತೂರೆ, ಶಿವಕುಮಾರ ಸೂರ್ಯವಂಶಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next