Advertisement

ವಿವಾದ್‌ ಸೇ ವಿಶ್ವಾಸ್‌ ಮಸೂದೆ ಅಂಗೀಕಾರ

09:53 AM Mar 14, 2020 | Hari Prasad |

ಹೊಸದಿಲ್ಲಿ: ತೆರಿಗೆ ವಿವಾದಗಳನ್ನು ವಿಶ್ವಾಸದಿಂದ ಬಗೆಹರಿಸಿಕೊಳ್ಳುವ, ವಿವಾದ್‌ ಸೆ ವಿಶ್ವಾಸ್‌ ಮಸೂದೆ ಸಂಸತ್ತಿನಲ್ಲಿ ಶುಕ್ರವಾರ ಅಂಗೀಕೃತಗೊಂಡಿದೆ. ಈಗಾಗಲೇ ಲೋಕಸಭೆಯಲ್ಲಿ ಅಂಗೀಕೃತವಾಗಿದ್ದ ಅದಕ್ಕೆ, ಶುಕ್ರವಾರ ರಾಜ್ಯಸಭೆಯಲ್ಲೂ ಒಪ್ಪಿಗೆ ಸಿಕ್ಕಿತು.

Advertisement

5 ಕೋಟಿ ರೂ.ಗಳೊಳಗೆ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವವರು, ಮಾ. 31ರೊಳಗೆ ಬಡ್ಡಿ ಮತ್ತು ಹೆಚ್ಚಿನ ದಂಡವಿಲ್ಲದೇ ತೆರಿಗೆ ಪಾವತಿಸಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅದಕ್ಕೂ ಹೆಚ್ಚಿನ ಮೊತ್ತ ಬಾಕಿಯಿದ್ದರೆ, ಇಲ್ಲಿ ವಿನಾಯ್ತಿ ಸಿಗುವುದಿಲ್ಲ.

ಅಲ್ಲದೇ ಇದು ನೋಟು ಅಮಾನ್ಯ ವೇಳೆ ತೆರಿಗೆ ತಪ್ಪಿಸಿಕೊಂಡಿದ್ದ ವ್ಯಕ್ತಿಗಳಿಗೆ ಕ್ಷಮಾದಾನವೂ ಅಲ್ಲ. ಅಂತಹ ವ್ಯಕ್ತಿಗಳು ಶೇ.75 ಹಣವನ್ನು ಕಟ್ಟಿದರೆ ಮಾತ್ರ ಶಿಕ್ಷೆಯಿಂದ ಪಾರಾಗುತ್ತಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next