Advertisement

ವಿಟ್ಲ ಮುಟ್ನೂರು: ಬಾವಿಯಲ್ಲಿ ಮುಳುಗಿ ಬಾಲಕ ಸಾವು

08:49 AM Apr 02, 2018 | Team Udayavani |

ವಿಟ್ಲ: ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ಪಿಲಿಂಜದಲ್ಲಿ ಈಜಾ ಡಲೆಂದು ಬಾವಿಗಿಳಿದ ಇಬ್ಬರು ಬಾಲಕರಲ್ಲಿ ಓರ್ವ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ಸಂಭವಿಸಿದೆ. ಪಿಲಿಂಜ ನಿವಾಸಿ ದರ್ಶನ್‌(15)  ಮೃತ ಬಾಲಕ. ದರ್ಶನ್‌ ಪುಣಚ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Advertisement

ಶಾಲೆಗೆ ರಜೆಯಿದ್ದ ಕಾರಣ ರವಿವಾರ ಮೂವರು ಬಾಲಕರು ಆಟ ವಾಡುತ್ತ ಮನೆ ಸಮೀಪದ ಬಾವಿ ಬಳಿ ತೆರಳಿದ್ದರು. ಬಳಿಕ ಇಬ್ಬರು  ನೀರಾಟಕ್ಕಾಗಿ ಬಾವಿಗೆ ಇಳಿದಿದ್ದರೆನ್ನ ಲಾಗಿದೆ. ಈ ಸಂದರ್ಭ ಇಬ್ಬರೂ  ಮುಳುಗೇಳುತ್ತಿದ್ದುದನ್ನು ಗಮನಿಸಿದ ಬಾವಿ ಕಟ್ಟೆ ಮೇಲಿದ್ದ ಮತ್ತೂಬ್ಬ ಬಾಲಕ ಸಹಾಯಕ್ಕಾಗಿ ಕಿರುಚಾಡಿದಾಗ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಬಾವಿಗೆ ಇಳಿದಿದ್ದಾರೆ. ಆದರೆ ದರ್ಶನ್‌ ಅದಾಗಲೇ ಸಾವನ್ನಪ್ಪಿದ್ದು, ಮತ್ತೋರ್ವನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಟ್ಲ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next