Advertisement

ಪೊಲೀಸರಿಂದ ಕಾಲನಿಗಳಿಗೆ ಭೇಟಿ

05:38 PM Apr 02, 2020 | Sriram |

ಕುಂದಾಪುರ: ಕುಂದಾಪುರ ಉಪವಿಭಾಗದ ಪೊಲೀಸ್‌ ಸಹಾಯಕ ಅಧೀಕ್ಷಕ ಹರಿರಾಮ್‌ ಶಂಕರ್‌ ಅವರ ಸೂಚನೆಯಂತೆ ಕುಂದಾಪುರ, ಬೈಂದೂರು ತಾಲೂಕಿನ ಠಾಣೆಗಳ ಪೊಲೀಸರು ಎಸ್‌ಸಿ, ಎಸ್‌ಟಿ ಕಾಲನಿಗಳಿಗೆ ಭೇಟಿ ನೀಡಿದರು.

Advertisement

ಎರಡು ತಾಲೂಕಿನಲ್ಲಿ 192 ಕಾಲನಿಗಳಿದ್ದು ಅವುಗಳಿಗೆ ಮಂಗಳ ವಾರದಿಂದ ನಾಲ್ಕು ದಿನಗಳ ಕಾಲ ಭೇಟಿ ನೀಡುವ ಸರ್ಕಲ್‌ ಇನ್ಸ್‌ಪೆಕ್ಟರ್‌ ಹಾಗೂ ಎಸ್‌ಐ ಮತ್ತು ಪೊಲೀಸರು ಕಾಲನಿಯಲ್ಲಿ ಇರುವವರ ಕುಂದು ಕೊರತೆ ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ.

ಮಂಗಳವಾರ ಮುದೂರು ಉದಯನಗರ ಕಾಲನಿಗೆ ಕೊಲ್ಲೂರು ಎಸ್‌ಐ ಮಹದೇವ ಬೊನ್ಸಾಲೆ, ಬುಧವಾರ ಹಾಲಾಡಿ ಜನತಾ ಕಾಲನಿಗೆ ಶಂಕರನಾರಾಯಣ ಎಸ್‌ಐ ಶ್ರೀಧರ ನಾಯ್ಕ, ಕೆಳಸುಂಕ ಕಾಲನಿಗೆ ಅಮಾಸೆಬೈಲು ಎಸ್‌ಐ ಅನಿಲ್‌, ಬೈಂದೂರು ಯೋಜನ ನಗರ ಕಾಲನಿಗೆ ಬೈಂದೂರು ಸರ್ಕಲ್‌ ಇನ್ಸ್‌ ಪೆಕ್ಟರ್‌ ಸುರೇಶ್‌ ನಾಯ್ಕ ಭೇಟಿ ನೀಡಿ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next