Advertisement

ಯಾತ್ರಿ ನಿವಾಸಕ್ಕೆ ಅಧಿಕಾರಿಗಳ ಭೇಟಿ-ಪರಿಶೀಲನೆ

11:16 AM May 07, 2019 | Suhan S |

ಬಾದಾಮಿ: ತಾಲೂಕಿನ ಮಹಾಕೂಟದ ಯಾತ್ರಿ ನಿವಾಸಕ್ಕೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ಎನ್‌. ದಯಾನಂದ ಮತ್ತು ಜೆಇ ಬಿ.ಎಂ. ರಾಠೊಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಉದಯವಾಣಿಯಲ್ಲಿ ಪ್ರಕಟ ಗೊಂಡ ವರದಿಗೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ನಂತರ ಮಾತನಾಡಿದ ಎಇಇ ಬಿ.ಎನ್‌. ದಯಾನಂದ ಯಾತ್ರಿ ನಿವಾಸವನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆ ಮಾಡಲಾಗುವುದು. ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಗಲೀಜು ಆಗದಂತೆ ಮುನ್ನಚ್ಚರಿಕೆ ವಹಿಸಲಾಗುವುದು. ಇಲಾಖೆಯಿಂದ ಬೋರ್‌ವೆಲ್ ಹಾಕಿಸಿ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿ ಸಲಾಗುವುದು. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಮಹಾಕೂಟಕ್ಕೆ ಬರುವ ಯಾತ್ರಿಕರಿಗೆ ಸೂಕ್ತ ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಮಹಾಕೂಟ ಟ್ರಸ್ಟ್‌ ಕಮಿಟಿಯ ಚೇರಮನ್‌ ಕುಮಾರಗೌಡ ಜನಾಲಿ ಅವರೊಂದಿಗೆ ಚರ್ಚಿಸಿ ಮಹಾಕೂಟದಲ್ಲಿ ಬರುವ ಯಾತ್ರಿಕರಿಗೆ ಟ್ರಸ್ಟ್‌ ಮತ್ತು ನಮ್ಮ ಇಲಾಖೆಯ ಯಾತ್ರಿ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜೆಇ ಬಿ.ಎಂ. ರಾಠೊಡ ಮಾತನಾಡಿ, ಸದರಿ ಯಾತ್ರಿ ನಿವಾಸವನ್ನು ನಾನೇ ನಿರ್ವಹಣೆ ಮಾಡುತ್ತಿದ್ದೇನೆ. ನೀರಿನ ಸಮಸ್ಯೆ ಬಗೆಹರಿಸಿ. ಉಳಿದ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ.ಯಾವುದೇ ಅವ್ಯವಸ್ಥೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next