Advertisement
ಮತ್ತೆ 4 ಶವ ಪತ್ತೆಉಡುಪಿ ಜಿಲ್ಲೆಯಲ್ಲಿ ಮಂಗಗಳ ಸಾವು ಮುಂದುವರಿದಿದ್ದು, ಬುಧವಾರ ವಿವಿಧೆಡೆ ಮತ್ತೆ 4 ಮಂಗಗಳ ಶವ ಪತ್ತೆಯಾಗಿವೆ. ಕಾರ್ಕಳ ಸಮೀಪದ ಶಿರ್ಲಾಲು, ಬೆಳ್ಮಣ್, ಆವರ್ಸೆ ಸಮೀಪದ ಹಿಲಿಯಾಣ, ಕಂಡೂರಿನ ವಲೂ¤ರುಗಳಲ್ಲಿ ತಲಾ ಒಂದೊಂದು ಮಂಗಗಳ ಶವ ಪತ್ತೆಯಾಗಿದೆ. ಎರಡು ಮಂಗಗಳ ಶವಗಳ ಅಂಗಾಂಗ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಬುಧವಾರ ಹಳ್ಳಿಹೊಳೆಯಲ್ಲಿ ಓರ್ವ ವ್ಯಕ್ತಿಯನ್ನು ಶಂಕಿತ ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ತಪಾಸಣೆಗೊಳಪಡಿಸಲಾಯಿತು. ಆದರೆ ಅವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿಲ್ಲ. ಇದುವರೆಗೆ ಜಿಲ್ಲೆಯಲ್ಲಿ 26 ಮಂದಿಯನ್ನು ತಪಾಸಣೆ ಗೊಳಪಡಿಸಲಾಗಿದ್ದು ಯಾರೊಬ್ಬರ ಲ್ಲಿಯೂ ಮಂಗನ ಕಾಯಿಲೆ ಪತ್ತೆಯಾ ಗಿಲ್ಲ. ಜಿಲ್ಲೆಯಾದ್ಯಂತ ಸಮೀಕ್ಷೆ, ಜಾಗೃತಿ ಕಾರ್ಯಕ್ರಮ, ಡಿಎಂಪಿ ತೈಲ ವಿತರಣೆಯನ್ನು ನಿರಂತರ ನಡೆಸಲಾಗುತ್ತಿದೆ. ಕೆಎಂಸಿ: 25 ಮಂದಿ ಚಿಕಿತ್ಸೆ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ ಸುಮಾರು 163 ಮಂದಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದು ಇದರಲ್ಲಿ 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.