Advertisement

ಹೊಯ್ಸಳೇಶ್ವರ ದೇಗುಲಕ್ಕೆ ಅಧಿಕಾರಿಗಳ ಭೇಟಿ

09:12 AM May 26, 2019 | Suhan S |

ಹಳೇಬೀಡು: ವಿಶ್ವ ವಿಖ್ಯಾತ ಹೊಯ್ಸಳೇಶ್ವರ ದೇವಾಲಯದಲ್ಲಿ ನೀರಿನ ಸಮಸ್ಯೆ, ದೇವಾಲಯದ ಮಾರ್ಗದರ್ಶಕರ ಸಮಸ್ಯೆ, ಉದ್ಯಾನವನ ಕಳಪೆ ನಿರ್ವಹಣೆ, ನಗರೇಶ್ವರ ದೇವಾಲಯದ ಕಾಪೌಂಡ್‌ ಕಳಪೆ ಕಾಮಗಾರಿ ಸೇರಿದಂತೆ ದೇವಾಲಯ ಹಲವು ಸಮಸ್ಯೆಗಳ ಆಗಾರವಾಗಿದೆ ಎಂದು ಉದಯ ವಾಣಿ ದಿನ ಪತ್ರಿಕೆಯಲ್ಲಿ ವಿಸ್ತೃತವಾಗಿ ವರದಿ ಪ್ರಕಟವಾದ ನಂತರ ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ಹಳೇಬೀಡು ಸುತ್ತಮುತ್ತಲಿನ ರಾಷ್ಟ್ರೀಯ ಸ್ಮಾರಕಗಳ ಸೌಕರ್ಯಗಳ ಕೊರತೆ, ಹಾಗೂ ಕಳಪೆ ನಿರ್ವಹಣೆಯನ್ನು ಗಮನಿಸಿದ ಕೇಂದ್ರ ಪುರಾತತ್ವ ಇಲಾಖೆ ಮಹಾ ನಿರ್ದೇಶಕಿ ಉಷಾ ಶರ್ಮ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ತರಾಟೆ: ದೇವಾಲಯದ ಆವರಣವನ್ನು ಸುಮಾರು ಒಂದು ಘಂಟೆಗೂ ಹೆಚ್ಚುಕಾಲ ವೀಕ್ಷಣೆ ಮಾಡಿ ಮಹಾ ನಿರ್ದೇಶಕಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷಕಿ ಮುರ್ತೇಶ್ವರಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತರಾತುರಿಯಲ್ಲಿ ನಡೆದ ಸ್ವಚ್ಛತೆ ಯನ್ನು ಗಮನಿಸಿದ್ದಲ್ಲದೇ ವಸ್ತು ಸಂಗ್ರಹಾಲಯದಲ್ಲಿ ತುಕ್ಕು ಹಿಡಿ ಯುತ್ತಿದ್ದ ಪೋಲೀಸ್‌ ಚೌಕಿ ಬಾಕ್ಸ್‌ನ್ನು ಕಾರ್ಮಿಕರ ಸಹಾಯದಿಂದ ಹೊರಹಾಕಲು ಸೂಚಿಸಿ, ಅದಕ್ಕೆ ಸರಿಯಾದ ರೂಪ ಕೊಟ್ಟು ಪೋಲೀಸರನ್ನು ಭದ್ರತೆಗೆ ನಿಯೋಜಿಸಿ ಎಂದು ತಾಕೀತು ಮಾಡಿದರು.

ಉತ್ಖನನ  ಸ್ಥಳ ಪರಿಶೀಲನೆ: ಹೊಸದಾಗಿ ದೇವಾಲಯದ ಆವರಣದಲ್ಲಿ ನಡೆಯು ತ್ತಿರುವ ಸ್ಥಳವನ್ನು ವೀಕ್ಷಣೆ ಮಾಡಿ, ಸರಿಯಾದ ಸಮಯಕ್ಕೆ ಹಾಗೂ ಯಾವುದೇ ಹೊಯ್ಸಳರ ಕಾಲದ ವಿಗ್ರಹಗಳಿಗೆ ತೊಂದರೆ ಯಾಗದಂತೆ ಸಂರಕ್ಷಣೆ ಮಾಡಬೇಕು ಹಾಗೂ ಪ್ರತಿ ಯೊಂದು ಉತ್ಖನದ ಮಾಹಿತಿ ಯನ್ನು ಸಮಯಕ್ಕೆ ಸರಿಯಾಗಿ ತಿಳಿಸುವಂತೆ ವಸ್ತು ಸಂಗ್ರಹಾಲಯದ ಸಂರಕ್ಷಣಾಧಿಕಾರಿ ಅರಾವಜಿ ಅವರಿಗೆ ಸೂಚಿಸಿದರು. ಜೊತೆಗೆ ಈ ಕಾರ್ಯದಲ್ಲಿ ತೊಡಗಿರುವ ಡಿ.ಜಿ. ಕಾರ್ಮಿಕರಿಗೆ ಸೂಕ್ತ ನೆರಳಿನ ವ್ಯವಸ್ಥೆ ಕಲ್ಪಸುವಂತೆ ತಿಳಿಸಿದರು.

Advertisement

ದೇವಾಲಯದ ಬಳಿ ಬಾರದ ಡಿ.ಜಿ.: ಪ್ರತಿ ನಿತ್ಯ ದೇವಾಲಯದ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಬರುವ ಸ್ಥಳದಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಗಳಿಗೆ ಅವುಗಳ ಬಗ್ಗೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ ಉಷಾ ಶರ್ಮ ಅವರಿಗೆ ಗಮನಕ್ಕೆ ತರಲು ಕಾಯುತ್ತಿದ್ದ ಸ್ಥಳೀಯರು ದೇವಾಲಯದ ಮೆಟ್ಟಿಲನ್ನೂ ಹತ್ತದ ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯ ವಸ್ತು ಸಂಗ್ರಹಾಲಯವನ್ನು ಹೊರತುಪಡಿಸಿ ಮತ್ತೆಲ್ಲೂ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್‌ ದೀಪಗಳು ಉರಿಯದೇ ಹಲವು ವರ್ಷಗಳೇ ಕಳೆದಿವೆ. ದೇವಾಲಯದ ಒಳಭಾಗ ಕತ್ತಲೆಯ ಕೋಣೆಯಂತಾಗಿದೆ. ಸೂಕ್ತ ನಿರ್ವಹಣೆ ಇಲ್ಲದೇ ದೇವಾಲಯದ ಒಳಭಾಗದ ವಿಗ್ರಹಗಳು ಬಿಳಿ ಬಣ್ಣಕ್ಕೆ ತಿರುಗಿವೆ. ದೇವಾಲಯಕ್ಕೆ ಸಂಬಂಧಿಸಿದಂತೆ ಸೂಕ್ತ ನಾಮಫ‌ಲಕಗಳೂ ಇಲ್ಲ ಎಂಬ ಇತ್ಯಾದಿ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಲು ಕಾಯುತ್ತಿದ್ದೆವು ಆದರೆ ಸ್ಮಾರಕಗಳನ್ನೇ ಗಮನಿಸದ ಅಧಿಕಾರಿಗಳಿಗೆ ಮೇಲಧಿಕಾರಿಗಳು ದಾರಿ ತಪ್ಪಿಸಿದ್ದಾರೆ ಎಂದು ಸ್ಥಳೀ ಯರು ತಮ್ಮ ಸಹನೆಯನ್ನು ಹೊರಹಾಕಿದರು

ವ್ಯವಸ್ಥೆ ಸುಧಾರಣೆಗೆ ಕ್ರಮ: ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಎಲ್ಲಾ ಸ್ಮಾರಕಗಳ ರಕ್ಷಣೆ ಹಾಗೂ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಕೆಳ ಹಂತದಿಂದ ಯೋಜನೆ ಗಳನ್ನು ತಯಾರಿಸಿ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಉಷಾ ಶರ್ಮ ಹೇಳಿದರು.

ಹೇಬೀಡು ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲ ನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿ, ಇದಕ್ಕೆ ಸಂಬಂದಿಸಿ ದಂತೆ ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಇಲಾಖೆ ಅಧಿಕಾರಿ ಶಿವಲಿಂಗಪ್ಪ ಕುಂಬಾರ್‌, ಪುರಾತತ್ವ ಸಂರಕ್ಷಣಾಧಿಕಾರಿ ಅರಾವಜಿ, ಸಹಾಯಕ ಸಂರಕ್ಷಣಾಧಿಕಾರಿ ಎಲ್.ಬಿ. ಕಾಮತ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next