Advertisement

ಮಳೆಹಾನಿ ಪ್ರದೇಶಕ್ಕೆ  ಸಂಸದ ನಳಿನ್‌ ಭೇಟಿ

12:05 PM Jul 09, 2018 | Team Udayavani |

ಮೂಲ್ಕಿ: ಮಳೆಯಿಂದ ತೊಂದರೆಗೆ ಒಳಗಾಗಿರುವ ಪ್ರದೇಶದ ಜನರಿಗೆ ಸರಕಾರದಿಂದ ಕೊಡಬಹುದಾದ ಎಲ್ಲ ಸವಲತ್ತುಗಳನ್ನು ತತ್‌ಕ್ಷಣ ಒದಗಿಸುವಂತೆ ಮೇಲಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಮೂಲ್ಕಿಗೆ ಆಗಮಿಸಿದ ಅವರು, ಮಳೆಯಿಂದ ತತ್ತರಗೊಂಡಿದ್ದ ಪ್ರದೇಶಗಳಿಗೆ ಭೇಟಿ ನೀಡಿ, ಮಾತನಾಡಿದರು.

Advertisement

ಬಪ್ಪನಾಡು ದೇವಸ್ಥಾನಕ್ಕೆ ಆಗಮಿಸಿದ ಸಂಸದರು, ಮಳೆ ನೀರಿನಲ್ಲಿ ತುಂಬಿಕೊಂಡಿದ್ದ ದೇಗುಲದ ಪರಿಸರವನ್ನು ವೀಕ್ಷಿಸಿದರು. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಮೂಲ್ಕಿ- ಮೂಡಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next