Advertisement

ಶಿರ್ವ ಶ್ರೀ ಮಹಾಲಸಾ ದೇವೀ ಸನ್ನಿಧಿ: ವಿಶ್ವರೂಪ ದರ್ಶನ

02:30 AM Nov 19, 2018 | Karthik A |

ಶಿರ್ವ: ಕಾಶೀಮಠ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವೀ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ವರ್ಷಂಪ್ರತಿ ನಡೆಯುವ ವಿಶ್ವರೂಪ ದರ್ಶನ ಸೇವೆಯ ಸಹಸ್ರ ಹಣತೆಗಳ ದೀಪಾಲಂಕಾರ ವೈಭವವು ರವಿವಾರ ಬೆಳಗಿನ ಜಾವ ಗಂಟೆ 5.00ಕ್ಕೆ ನೆರವೇರಿತು.

Advertisement

ಪ್ರಾತಃಕಾಲ ಭಜನ ಮಂಡಳಿ ವತಿಯಿಂದ ಭಜನೆ ಸೇವೆ ನಡೆದು 5 ರಿಂದ ದೀಪಾಲಂಕಾರ, ಉಷಃಕಾಲದ ಜಾಗರ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮದ ವಿಧಿವಿಧಾನಗಳು ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ್‌ ಭಟ್‌ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ದೀಪಾರಾಧನೆ ಮಾಡಿದರೆ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಸಹಸ್ರಾರು ಹಣತೆಗಳನ್ನು ಉರಿಸಿ ದೇವರ ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಿದಾನಂದ ಪೈ, ಕೋಶಾಧಿಕಾರಿ ಉದಯ ಕೋದಂಡ ಶೆಣೈ, ಸದಸ್ಯರಾದ ರಾಮದಾಸ್‌ ಶೆಣೈ,ನವೀನ್‌ ಶೆಣೈ, ಶ್ರೀ ಮಹಾಲಸಾ ನಾರಾಯಣೀ ಭಜನ ಮಂಡಳಿಯ ಅಧ್ಯಕ್ಷ ಜಿ. ಶ್ರೀನಿವಾಸ ಶೆಣೈ ಮತ್ತು ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next