Advertisement

ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಪೇಜಾವರ ಶ್ರೀಗಳ ಭೇಟಿ

06:48 PM Oct 22, 2022 | Team Udayavani |

ಮದ್ದೂರು: ಮದ್ದೂರು ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಉಡುಪಿ ಮಠದ ಪೇಜಾವರ ಶ್ರೀಗಳು ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Advertisement

ದೇವಾಲಯಕ್ಕೆ ಆಗಮಿಸಿದ ಶ್ರೀಗಳನ್ನು ಪ್ರಧಾನ ಅರ್ಚಕ ಪ್ರದೀಪ್‌ ಆಚಾರ್ಯ ಅವರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಅಭಿನಂದಿಸಿ ಗೌರವಿಸಿದರು.

ಬಳಿಕ ಶ್ರೀಗಳು ದೇವರ ದರ್ಶನ ಪಡೆದು ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು ದೇವಾಲಯದ ಆವರಣದಲ್ಲಿ ನೀರಿನ ಜಲವಿದ್ದು ಉಸಿರಿರುವ ಐತಿಹಾಸಿಕ ಸ್ಥಳವನ್ನು ಸರ್ಕಾರ ವಿಶೇಷ ಅನುದಾನದಲ್ಲಿ ಅಭಿವೃದ್ದಿಪಡಿಸಬೇಕೆಂದು ಮನವಿ ಮಾಡಿದರು.

ನಟ ಚೇತನ್‌ ರವರು ಪ್ರಚಾರಕ್ಕಾಗಿ ಈ ರೀತಿಯಾದಂತಹ ಹೇಳಿಕೆಗಳನ್ನು ನೀಡುತ್ತಿದ್ದು ಅವರವರು ನೋಡುವ ದೃಷ್ಠಿಕೋನದಲ್ಲಿ ಎಲ್ಲಾ ಅಡಗಿರುತ್ತದೆಂದ ಅವರು ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆಯಲ್ಲ ಹಿಂದುತ್ವ ವಿಶಾಲವಾದದ್ದು ಅದರಲ್ಲೂ ಬ್ರಾಹ್ಮಣತ್ವವು ಬರುತ್ತದೆಂದರು.

ಈ ವೇಳೆ ಅರ್ಚಕರಾದ ಸುರೇಶ್‌ಆಚಾರ್ಯ, ಗಿರೀಶ್‌, ಪಾರುಪತ್ತೆದಾರ ರಘು ಇತರರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next