Advertisement

ಹರ್ಷ ಮನೆಗೆ ಪೇಜಾವರ ಶ್ರೀ ಭೇಟಿ, ನೆರವು

01:40 AM Mar 12, 2022 | Team Udayavani |

ಉಡುಪಿ: ಶಿವಮೊಗ್ಗದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಸಂಘಟನೆಗಳ ಮುಖಂಡ ಹರ್ಷನ ಮನೆಗೆ ಶುಕ್ರವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ ಆಶಿರ್ವದಿಸಿದ ಶ್ರೀಗಳು ಇಂತಹ ದುರ್ಘ‌ಟನೆಗಳು ಮುಂದೆ ನಡೆಯದಿರಲಿ ಎಂದು ಪ್ರಾರ್ಥಿಸಿದರು.

Advertisement

ಕೆಲವು ವರ್ಷಗಳ ಹಿಂದೆ ಕೋಮು ಸಂಘರ್ಷ ವೇಳೆ ಹತ್ಯೆಗೀಡಾಗಿದ್ದ ಶಿವಮೊಗ್ಗದ ಹಿಂದೂ ಕಾರ್ಯಕರ್ತ ವಿಶ್ವನಾಥನ ಮನೆಗೂ ಪೇಜಾವರ ಶ್ರೀಗಳು ತೆರಳಿ ಅವರ ತಾಯಿಗೆ ಸಾಂತ್ವಾನ ಹೇಳಿದರು.

ಮೃತ ಹರ್ಷನ ಹೆತ್ತವರಿಗೆ 10 ಸಾವಿರ ರೂ., ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ವಿಶ್ವನಾಥನ ತಾಯಿ ಮೀನಾಕ್ಷಮ್ಮ ಅವರಿಗೆ 1 ಲಕ್ಷ ರೂ., ಸಾಂತ್ವನ ನಿಧಿ ನೀಡಿ ಹಾರೈಸಿದರು. ಗೋಸಾಯಿ ಮಠದ ಸ್ವಾಮೀಜಿ, ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next