Advertisement

ರಾತ್ರೋರಾತ್ರಿ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣ :ಪೊಲೀಸರಿಂದ ತೆರವು, ಅಭಿಮಾನಿಗಳ ಪ್ರತಿಭಟನೆ

05:52 PM Sep 18, 2021 | Team Udayavani |

ಮೈಸೂರು : ರಾತ್ರೋ ರಾತ್ರಿ ಮೈಸೂರಿನ ವಿಷ್ಣುವರ್ಧನ್ ಪಾರ್ಕ್ ನಲ್ಲಿ ಅಭಿಮಾನಿಗಳಿಂದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು ಇಂದು ಮುಂಜಾನೆ ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಿದ ಘಟನೆ ನಡೆದಿದೆ.

Advertisement

ಇಂದು (ಸೆಪ್ಟೆಂಬರ್ 18) ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಆಚರಿಸುವ ಸಲುವಾಗು ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅಭಿಮಾನಿಗಳು ರಾತ್ರೋ ರಾತ್ರಿ ಮೈಸೂರಿನ ಅರಮನೆ ‌ಬಲರಾಮ ದ್ವಾರದ ಬಳಿ ಇರುವ ವಿಷ್ಣುವರ್ಧನ್ ಪಾರ್ಕ್ ನಲ್ಲಿ ಪೀಠ ಇರುವ ಆರು ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಈ ವಿಚಾರ ಗೊತ್ತಾದ ಪೊಲೀಸರು ಮುಂಜಾನೆ ವಿಷ್ಣುವರ್ಧನ್ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ, ಈ ಘಟನೆಯನ್ನು ಖಂಡಿಸಿ ವಿಷ್ಣು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ :ಕ್ರಿಕೆಟ್ ನ ಅಪಾಯಕಾರಿ ರಣತಂತ್ರ; ಕ್ರಿಕೆಟಿನ ಖಳನಾಯಕ ಹೆರಾಲ್ಡ್‌ ಲಾರ್‌ವುಡ್‌

Advertisement

Udayavani is now on Telegram. Click here to join our channel and stay updated with the latest news.

Next