Advertisement

ರಣಜಿ ಟ್ರೋಫಿ: ಮಗಳ ನಿಧನದ ದುಃಖದ ನಡುವೆಯೂ ಶತಕ ಸಿಡಿಸಿ ವಿಷ್ಣು ಸೋಲಂಕಿ

03:18 PM Feb 26, 2022 | Team Udayavani |

ಭುವನೇಶ್ವರ: ಕೆಲವು ದಿನಗಳ ಹಿಂದೆ ನವಜಾತ ಶಿಶುವನ್ನು ಕಳೆದುಕೊಂಡ ನೋವಿನಲ್ಲೂ ಬರೋಡಾ ಬ್ಯಾಟರ್ ವಿಷ್ಣು ಸೋಲಂಕಿ ಅವರು ಶುಕ್ರವಾರ ಭರ್ಜರಿ ಶತಕ ಸಿಡಿಸಿದ್ದಾರೆ.

Advertisement

ಭುವನೇಶ್ವರದಲ್ಲಿ ನಡೆದ ರಣಜಿ ಟ್ರೋಫಿ 2022 ಮುಖಾಮುಖಿಯಲ್ಲಿ ಚಂಡೀಗಢ ತಂಡದ ವಿರುದ್ಧ ವಿಷ್ಣು ಸೋಲಂಖಿ ತಮ್ಮ ವೈಯಕ್ತಿಕ ದುರಂತದ ನಡುವೆಯೂ ಶತಕ ಗಳಿಸಿದರು.

ಬರೋಡಾ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 398 ರನ್ ಗಳಿಸಿತು. ಚಂಡೀಗಢ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 168 ರನ್‌ಗಳಿಗೆ ಆಲೌಟ್ ಆಗಿತ್ತು. ಸೋಲಂಕಿ ಬ್ಯಾಟಿಂಗ್ ಸಹಾಯದಿಂದ ಬರೋಡಾ ತಂಡ 230 ರನ್‌ಗಳ ಮಹತ್ವದ ಮುನ್ನಡೆ ಗಳಿಸಲು ಸಾಧ್ಯವಾಯಿತು.

ನಂ.5ರಲ್ಲಿ ಬ್ಯಾಟಿಂಗ್ ಗೆ ಬಂದ ಸೋಲಂಕಿ 161 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದರು. ಅವರ ವೀರಾವೇಶದ ಶತಕವು 12 ಬೌಂಡರಿಗಳನ್ನು ಒಳಗೊಂಡಿತ್ತು ಮತ್ತು ಬರೋಡಾ ಬ್ಯಾಟರ್ ಆರಂಭಿಕ ಜ್ಯೋತ್ಸ್ನಿಲ್ ಸಿಂಗ್ ಅವರಿಂದ ಸಮರ್ಥ ಬೆಂಬಲವನ್ನು ಪಡೆದರು. ಚಂಡೀಗಢದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜ್ಯೋತ್ಸ್ನಿಲ್ 96 ರನ್ ಗಳಿಸಿದ್ದ ವೇಳೆ ರನೌಟಾದರು.

ಇದನ್ನೂ ಓದಿ:ಲಂಕಾ ಸರಣಿಯಿಂದ ಹೊರಬಿದ್ದ ಋತುರಾಜ್ ಗಾಯಕ್ವಾಡ್: ಬದಲಿ ಆಟಗಾರನ ನೇಮಿಸಿದ ಬಿಸಿಸಿಐ

Advertisement

ಇತ್ತೀಚೆಗೆ ಹುಟ್ಟಿದ ಹೆಣ್ಣು ಮಗು ನಿಧನವಾದ ದುರದೃಷ್ಟಕರ ಸುದ್ದಿ ತಿಳಿದಾಗ ವಿಷ್ಣು ಸೋಲಂಕಿ ಅವರು ಬರೋಡಾ ತಂಡದ ಸಹ ಆಟಗಾರರೊಂದಿಗೆ ಭುವನೇಶ್ವರದಲ್ಲಿದ್ದರು. ತಕ್ಷಣ ಅವರು ತಮ್ಮ ಮಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಡೋದರಾಕ್ಕೆ ಮರಳಿದರು. ಮೂರು ದಿನಗಳ ನಂತರ ಅವರು ವಿಮಾನದ ಮೂಲಕ ಮತ್ತೆ ಭುವನೇಶ್ವರಕ್ಕೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next