Advertisement

Virtual Programme: ಕಾಸರಗೋಡು ಮೀನುಗಾರಿಕೆ ಬಂದರಿಗೆ ಪ್ರಧಾನಿ ಶಿಲಾನ್ಯಾಸ

01:40 AM Sep 01, 2024 | Team Udayavani |

ಕಾಸರಗೋಡು: ಪಿ.ಎಂ.ಎಂ.ಎಸ್‌.ವೈ. ಯೋಜನೆ ಮೂಲಕ ಜಿಲ್ಲೆಯಲ್ಲಿ  ನಿರ್ಮಾಣವಾಗಲಿರುವ ಮೀನುಗಾರಿಕೆ ಬಂದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಶಿಲಾನ್ಯಾಸ ನೆರವೇರಿಸಿದರು.

Advertisement

ಕೇಂದ್ರ ಮೀನುಗಾರಿಕೆ, ಮೃಗ ಸಂರಕ್ಷಣೆ ಕ್ಷೀರಾಭಿವೃದ್ಧಿ ಖಾತೆ ಸಚಿವ ರಾಜೀವ್‌ ರಂಜನ್‌ ಸಿಂಗ್‌ ಮುಖ್ಯ ಭಾಷಣ ಮಾಡಿದರು. ಕೇಂದ್ರ ಮೀನುಗಾರಿಕೆ, ಮೃಗ ಸಂರಕ್ಷಣೆ ಕ್ಷೀರಾಭಿವೃದ್ಧಿ ಖಾತೆ ಸಹ ಸಚಿವ ಜಾರ್ಜ್‌ ಕುರಿಯನ್‌,  ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಶಿಲಾನ್ಯಾಸ ಫಲಕ ಅನಾವರಣಗೊಳಿಸಿದರು.

ರಾಜ್ಯ ಮೀನುಗಾರಿಕೆ, ಸಾಂಸ್ಕೃತಿಕ, ಯುವಜನ ಖಾತೆ ಸಚಿವ ಸಜಿ ಚೆರಿಯನ್‌ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಕೆ.ಇಂಬುಶೇಖರ್‌, ನಗರಸಭೆ ಅಧ್ಯಕ್ಷ ಅಬ್ಟಾಸ್‌ ಬೀಗಂ,  ಸ್ಥಾಯೀ ಸಮಿತಿ ಅಧ್ಯಕ್ಷೆ ಸಾಹಿರ್‌ ಆಸಿಫ್‌, ಖಾಲಿದ್‌ ಪಚ್ಚಕ್ಕಾಡ್‌, ರಜನಿ ಪ್ರಭಾಕರನ್‌,  ಸದಸ್ಯರಾದ ಅಜಿತ್‌ ಕುಮಾರನ್‌, ಮುಸ್ತಫಾ, ಎಂ.ಉಮಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಆರ್‌.ಗಂಗಾಧರನ್‌, ಅಂಜು ಜೋಷ್ಟಿ, ಎ.ಅಬ್ದುಲ್‌ ರಹಮಾನ್‌, ಅಸೀಸ್‌ ಕಡಪ್ಪುರ, ಕುರ್ಯಾಕೋಸ್‌, ಮೀನು ಗಾರಿಕೆ ನಿರ್ದೇಶಕಿ ಕೆ.ಎ.ಲಬೀಬ್‌ ಉಪಸ್ಥಿತರಿದ್ದರು. ಸುನಿಲ್‌ ಸಾಮ್ಯುವಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next