Advertisement

ಸೆಹವಾಗ್‌ ಕಾಲಿಗೆರಗಿದ ಬೆಂಗಳೂರು ಅಭಿಮಾನಿ

06:05 AM Sep 11, 2018 | Team Udayavani |

ಬೆಂಗಳೂರು: ವೀರೇಂದ್ರ ಸೆಹವಾಗ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿ 3 ವರ್ಷಗಳೇ ಉರುಳಿದರೂ ಅವರ ಕ್ರೇಝ್ ಕಡಿಮೆಯಾಗಿಲ್ಲ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕ್ರಿಕೆಟ್‌ ಪಂದ್ಯವೊಂದರಲ್ಲಿ ಅಭಿಮಾನಿಯೋರ್ವ ಅವರ ಕಾಲಿಗೆರಗಿದ್ದೇ ಇದಕ್ಕೆ ಸಾಕ್ಷಿ.

Advertisement

ಈ ಪಂದ್ಯದಲ್ಲಿ ವೀರೇಂದ್ರ ಸೆಹವಾಗ್‌ ಕೂಡ ಪಾಲ್ಗೊಂಡಿದ್ದರು. ಸಿನಿಮಾ ನಟರಿಗೆ ಏರ್ಪಡಿಸಿದ ಕೂಟ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.  ಬ್ಯಾಟಿಂಗ್‌ ನಡೆಸಲು ಸೆಹವಾಗ್‌ ಬರುತ್ತಿದ್ದಂತೆ ಅಕ್ರಮವಾಗಿ ಕ್ರೀಡಾಂಗಣದೊಳಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಓಡಿ ಹೋಗಿ ಸೆಹವಾಗ್‌ ಕಾಲಿಗೆರಗಿ ನಮಸ್ಕರಿಸಿದ್ದಾನೆ. ವೀರೂ ತಾಳ್ಮೆಯಿಂದ ಆ ಅಭಿಮಾನಿಯ ಬೆನ್ನುತಟ್ಟಿ ಮೇಲಕ್ಕೆತ್ತಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬಂದಿ ಅಭಿಮಾನಿಯನ್ನು ಹೊರಕ್ಕೆ ಎಳೆದೊಯ್ದುರು. 

Advertisement

Udayavani is now on Telegram. Click here to join our channel and stay updated with the latest news.

Next