Advertisement

ವಿಶ್ವಕಪ್ ಟೂರ್ನಿಯಲ್ಲಿ ಸೋತ ಭಾರತ : ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದ ಕೊಹ್ಲಿ

11:42 AM Nov 09, 2021 | Team Udayavani |

ನವದೆಹಲಿ : 2021ರ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲುಪದೇ ಭಾರತ ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಐಸಿಸಿ ಟಿ-20 ವಿಶ್ವಕಪ್ 2021 ಆರಂಭವು ಟೀಮ್ ಇಂಡಿಯಾಕ್ಕೆ ಉತ್ತಮವಾಗಿರಲಿಲ್ಲ. ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸೋತಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು.

Advertisement

ಇದೇ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವಿಟ್ ಮಾಡಿದ್ದಾರೆ. ನಾವು ಒಟ್ಟಾಗಿ ಒಂದು ಗುರಿಯನ್ನು ಸಾಧಿಸಲು ಬಯಸುತ್ತೇವೆ. ದುರಾದೃಷ್ಟವಶಾತ್ ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಒಂದು ತಂಡವಾಗಿ ನಮಗಿಂತ ಹೆಚ್ಚು ನಿರಾಸೆಯನ್ನು ಯಾರೂ ಹೊಂದಿರುವುದಿಲ್ಲ.

ನೀವೆಲ್ಲರೂ ನಮಗೆ ಸಾಕಷ್ಟು ಬೆಂಬಲ ನೀಡಿದ್ದೀರಿ ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಮತ್ತೆ ಗೆಲುವಿನ ಹಳಿಗೆ ಹಿಂತಿರುಗುವುದು ಮತ್ತು ಗೆಲುವಿನ ದಾಪುಗಾಲುಗಳನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next