Advertisement
ಆರ್ ಸಿಬಿ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಅವರು, ಆರ್ ಸಿಬಿ ನಾಯಕತ್ವ ತೊರೆಯುವ ನಿರ್ಧಾರವು ಸರಳ ಮತ್ತು ನೇರವಾಗಿತ್ತು. ಕೆಲಸದ ಹೊರೆಯನ್ನು ಕಡಿಮೆ ಮಾಡಲು ಈ ನಿರ್ಧಾರ ಮಾಡಲಾಗಿತ್ತು ಎಂದಿದ್ದಾರೆ.
Related Articles
Advertisement
“ನಾನು ನನಗಿಂತ ಹೆಚ್ಚು ವಿಷಯಗಳನ್ನು ಹಿಡಿದಿಟ್ಟುಕೊಳ್ಳುವವನಲ್ಲ. ನಾನು ಹೆಚ್ಚಿನ ಒತ್ತಡ ನಿಭಾಯಿಸಬಲ್ಲೆ ಎಂದು ನನಗೆ ತಿಳಿದಿದ್ದರೂ, ನಾನು ಆ ನಡುವಿನ ಪ್ರಕ್ರಿಯೆಯನ್ನು ಆನಂದಿಸಲು ಹೋಗದಿದ್ದರೆ, ಯಾವುದೇ ಕೆಲಸ ಮಾಡಲು ಹೋಗುವುದಿಲ್ಲ” ಎಂದು ಕೊಹ್ಲಿ ಹೇಳಿದರು.
ತನ್ನ ನಿರ್ಧಾರದ ಬಗ್ಗೆ ಜನರ ಮಾತನ್ನು ತಳ್ಳಿಹಾಕಿದ ಕೊಹ್ಲಿ, “ವಾಸ್ತವವಾಗಿ ಏನೂ ಇರಲಿಲ್ಲ. ನಾನು ನನ್ನ ಜೀವನವನ್ನು ತುಂಬಾ ಸರಳ ಇಟ್ಟುಕೊಳ್ಳುತ್ತೇನೆ, ನಾನು ನಿರ್ಧಾರ ತೆಗೆದುಕೊಳ್ಳಬೇಕೆಂದು ಬಯಸಿದಾಗ ತೆಗೆದುಕೊಂಡೆ ಮತ್ತು ಅದನ್ನು ಘೋಷಿಸಿದ್ದೇನೆ ಅಷ್ಟೇ” ಎಂದು ವಿರಾಟ್ ಹೇಳಿದರು.
ವಿರಾಟ್ ರಾಜೀನಾಮೆಯಿಂದ ತೆರವಾಗಿರುವ ಆರ್ ಸಿಬಿ ನಾಯಕತ್ವ ಸ್ಥಾನಕ್ಕೆ ಸದ್ಯ ಯಾರನ್ನೂ ನೇಮಿಸಲಾಗಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ಅಥವಾ ಫಾಫ್ ಡುಪ್ಲೆಸಿಸ್ ತಂಡದ ಚುಕ್ಕಾಣಿ ಹಿಡಿಯಬಹುದು ಎನ್ನಲಾಗಿದೆ.