Advertisement

ಮುಂಬಯಿ ಪೊಲೀಸ್‌ ಕಲ್ಯಾಣಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ ವಿರಾಟ್‌ ದಂಪತಿ

08:11 AM May 11, 2020 | Sriram |

ಮುಂಬಯಿ: ಕೋವಿಡ್‌ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿರುವ ಮುಂಬಯಿ ಪೊಲೀಸರ ಕಲ್ಯಾಣಕ್ಕಾಗಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರು ತಲಾ 5 ಲಕ್ಷ ರೂ. ಕೊಡುಗೆ ನೀಡಿದ್ದಾರೆ.

Advertisement

“ಮುಂಬಯಿ ಪೊಲೀಸ್‌ ಕಲ್ಯಾಣಕ್ಕೆ ತಲಾ 5 ಲಕ್ಷ ರೂ. ಗಳನ್ನು ನೀಡಿದ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕ ಶರ್ಮಾ ಅವರಿಗೆ ಧನ್ಯವಾದಗಳು. ಈ ನಿಮ್ಮ ಕೊಡುಗೆ ಕೋವಿಡ್‌ 19 ವೈರಸ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ರಕ್ಷಿಸುತ್ತದೆ’ ಎಂದು ಮುಂಬಯಿ ಪೊಲೀಸ್‌ ಆಯುಕ್ತ ಪರಮ್‌ ವೀರ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಕೊಹ್ಲಿ ಮತ್ತು ಅನುಷ್ಕಾ ಈಗಾಗಲೇ ಪ್ರಧಾನ ಮಂತ್ರಿ ಕೋವಿಡ್‌ 19 ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇದರ ಹೊರತಾಗಿಯೂ ಲಾಕ್‌ಡೌನ್‌ ಸಂಕಷ್ಟ ಸಮಯದಲ್ಲೂ ಅಗತ್ಯವಿರುವವರಿಗೂ ಸಹಾಯ ಮಾಡುವಲ್ಲಿ ಈ ಜೋಡಿ ನಿರತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next