Advertisement

Chikkamagaluru: ಹುಲಿ ಚರ್ಮದ ಮೇಲೆ ಕೂತಿರೋ ದತ್ತಪೀಠದ ಶಾಖಾದ್ರಿ… ಕ್ರಮಕ್ಕೆ ಆಗ್ರಹ

12:23 PM Oct 27, 2023 | Team Udayavani |

ಚಿಕ್ಕಮಗಳೂರು: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಳಿ ಹುಲಿ ಉಗುರು ಪತ್ತೆಯಾದ ಬಳಿಕ ಆರಂಭವಾದ  ಹುಲಿ ಉಗುರು, ಚರ್ಮ ಕಾರ್ಯಾಚರಣೆ ಚಿತ್ರ ನಟರು, ಸ್ವಾಮೀಜಿಗಳು ಸೇರಿದಂತೆ ರಾಜಕಾರಣಿಗಳ ಸುತ್ತಲೂ ಸುತ್ತಿದ್ದು ಇದೀಗ ಚಿಕ್ಕಮಗಳೂರಿನ ದತ್ತಪೀಠಡಾ ವರೆಗೂ ಬಂದು ನಿಂತಿದೆ.

Advertisement

ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್ ಆಗಿದ್ದು, ಅದರಂತೆ ಶಾಖಾದ್ರಿ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕ ಅರಣ್ಯ ಇಲಾಖೆಗೆ ದೂರು ನೀಡಲು ಮುಂದಾಗಿದೆ.

ದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರೋ ಶಾಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಎಫ್.ಓ.ಗೆ ಶ್ರೀರಾಮ ಸೇನೆ ಮನವಿ ಮಾಡುವ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: Shocking Video: ಹುಲಿ ಜತೆ ರಸ್ತೆಯಲ್ಲಿ ವಾಕಿಂಗ್… ಇದು ಹುಚ್ಚಾಟದ ಪರಮಾವಧಿ-ನೆಟ್ಟಿಗರ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next