Advertisement

ವಿತ್ತ ಸಚಿವೆ ನಿರ್ಮಲಾ ಔದಾರ್ಯಕ್ಕೆ ಮೆಚ್ಚುಗೆ

12:29 AM May 10, 2022 | Team Udayavani |

ಹೊಸದಿಲ್ಲಿ: ನ್ಯಾಶನಲ್‌ ಸೆಕ್ಯೂರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಸಂಸ್ಥೆಯ ಬೆಳ್ಳಿಹಬ್ಬ ಸಮಾರಂಭದಲ್ಲಿ ತಮಗಿಂತ ಕಿರಿಯ ಅಧಿಕಾರಿಯ ಮೇಲೆ ಮಾನವೀಯತೆ ಮೆರೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಎನ್‌ಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕಿ ಕು. ಪದ್ಮಜಾ ಚಂದುರು ಅವರ ಗಂಟಲು ಒಣಗಿದ ಕಾರಣ, ಅವರ ಗಂಟಲಿನಿಂದ ಧ್ವನಿ ಹೊರಬಾರದೆ ಭಾಷಣಕ್ಕೆ ಅಡಚಣೆಯಾಯಿತು. ಕೂಡಲೇ ನಿರ್ಮಲಾ ಅವರು ತಮ್ಮ ಮುಂದಿಟ್ಟಿದ್ದ ನೀರು ತುಂಬಿದ್ದ ಲೋಟ ನೀಡಿದರು. ಅನಂತರ ಚಂದುರು ಸಚಿವರಿಗೆ ಧನ್ಯವಾದ ಹೇಳಿದರು.

ಸಮಾರಂಭದಲ್ಲಿದ್ದವರೆಲ್ಲರೂ ಸಚಿವೆಯ ಔದಾರ್ಯಕ್ಕೆ ಮಾರು ಹೋಗಿ ಚಪ್ಪಾಳೆಯ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next