Advertisement

ವಿರಾಜಪೇಟೆ: ಗುಡ್‌ಫ್ರೆçಡೇ ಆಚರಣೆ

07:58 PM Apr 20, 2019 | Team Udayavani |

ಮಡಿಕೇರಿ : ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ಗುಡ್ ಫ್ರೈಡೆಯನ್ನು ಕ್ರೈಸ್ತ ಬಾಂಧವರು ಅರ್ಥಪೂರ್ಣವಾಗಿ ಆಚರಿಸಿದರು.
ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಬಾಂಧವರು ನಂತರ ಸರ್ಕಾರಿ ಆಸ್ಪತ್ರೆ, ಮಲಬಾರ್‌ ರಸ್ತೆಯಲ್ಲಿರುವ ಅನ್ವರ್‌ಲ್‌ ಹುದಾ ಅನಾಥಾಶ್ರಮ ಮತ್ತು ಹೆಗ್ಗಳ ಗ್ರಾಮದಲ್ಲಿರುವ ಅನಾಥಾಶ್ರಮಕ್ಕೆ ತೆರಳಿ ಹಣ್ಣುಹಂಪಲು ವಿತರಿಸಿದರು. ವಿಶೇಷವಾಗಿ ವಿರಾಜಪೇಟೆ ಪ.ಪಂಯ ಸ್ವತ್ಛತಾ ಕಾರ್ಮಿಕರಿಗೂ ಹಣ್ಣು, ಹಂಪಲು ತರಿಸುವ ಮೂಲಕ ಕ್ರೈಸ್ತರು ಶುಭ ಶುಕ್ರವಾರವನ್ನು ಅರ್ಥಪೂರ್ಣಗೊಳಿಸಿದರು.

Advertisement

ಚರ್ಚ್‌ನ ಧರ್ಮಗುರುಗಳಾದ ಫಾ| ರೋಷನ್‌ ಬಾಬು ಅವರು ರೋಗಿಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದರು.

ಕನ್ಯಾಸ್ತ್ರೀಗಳಾದ ಜಾನೇಟ್‌, ಫಿಲೋ ಮಿನಾ, ಅನ್ನಾ ಮೇರಿ, ಪ್ರಮು ಖರಾದ ಮರಿÌàನ್‌ ಲೊಬೊ, ಸ್ಟೇನ್ಲಿ, ಜೋಕಿಮ್‌ ರೋಡ್ರಿಗ್ರಸ್‌, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವನಾಥ್‌ ಸಿಂಪಿ ಆಸ್ಪತ್ರೆಯ ಸಿಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next