Advertisement

ನಂಬಿಕೆ ಹೆಸರಿನಲ್ಲಿ ಹಿಂಸಾಚಾರ ಸಲ್ಲದು; ಪ್ರಧಾನಿ ಮೋದಿ

02:58 PM Aug 15, 2017 | Team Udayavani |

ನವದೆಹಲಿ:ನಂಬಿಕೆ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇತ್ತೀಚೆಗೆ ದೇಶದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

Advertisement

ನಂಬಿಕೆ ಹೆಸರಿನಲ್ಲಿ ಹಿಂಸಾಚಾರದಿಂದ ಏನೂ ಸಾಧ್ಯವಿಲ್ಲ, ಇದನ್ನು ಭಾರತದಲ್ಲಿ ಒಪ್ಪಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಶಾಂತಿಗೆ, ಸಹಬಾಳ್ವೆ ಹಾಗೂ ಒಗ್ಗಟ್ಟಿಗೆ ಹೆಚ್ಚಿನ ಬೆಲೆ ಎಂದು ಹೇಳಿದರು.

ಜಾತಿವಾದ ಮತ್ತು ಕೋಮುವಾದ ಕೂಡಾ ಭಾರತದಲ್ಲಿ ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬಾರದು ಎಂದು ಕೆಂಪುಕೋಟೆಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಾತಿವಾದ ಮತ್ತು ಕೋಮುವಾದ ವಿಷವಿದ್ದಂತೆ ಇದರಿಂದ ನಮ್ಮ ದೇಶಕ್ಕೆ ಯಾವುದೇ ಲಾಭವಿಲ್ಲ, ಅಲ್ಲದೇ ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಬೇಡಿ ಎಂದು ಮೋದಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next