Advertisement

ನಿಯಮ ಉಲ್ಲಂಘಿಸಿ ಮರಳುಗಾರಿಕೆ

06:12 AM Jun 13, 2020 | Team Udayavani |

ಮುಂಡರಗಿ: ತುಂಗಭದ್ರಾ ನದಿಯಲ್ಲಿ ಮರಳು ತೆಗೆಯುವಾಗ ನಿಯಮ ಉಲ್ಲಂಘಿಸಲಾಗಿದೆ ಎಂದು ರೈತ ಮುಖಂಡ ವಿಠಲ್ ಗಣಾಚಾರಿ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜೊತೆಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ನದಿಯಲ್ಲಿ ಮರಳು ತೆಗೆಯಲಾಗುತ್ತಿದೆ. ಗುತ್ತಿಗೆದಾರರು ಜೆಸಿಬಿಯಿಂದ ನೀರಿನಲ್ಲಿಯೇ ಮರಳು ತೆಗೆಯುತ್ತಾರೆ. ನದಿಯಲ್ಲಿ ಅಡ್ಡಲಾಗಿ ರಸ್ತೆ ನಿರ್ಮಿಸಿದ್ದಾರೆ. ಮುಖ್ಯ ರಸ್ತೆಯಲ್ಲಿ ಮರಳು ಸಾಗಾಟ ಮಾಡುವಾಗ ಚೆಕ್‌ಪೋಸ್ಟ್‌ಗಳು ಇಲ್ಲ. ಮರಳು ಪಾಸ್‌ಗಳ ದುರ್ಬಳಕೆ ವಿಪರೀತವಾಗಿದೆ. ನದಿಯಿಂದ ಮರಳು ತೆಗೆಯುವಾಗ ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ ಎನ್ನುವುದರ ಬಗ್ಗೆ ದಾಖಲೆ ಇಡಬೇಕು. ತಾಲೂಕು ಟಾಸ್ಕ್ ಪೋರ್ಸ್‌ ಸಮಿತಿಯವರು ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯಲು ರಾತ್ರಿ ಗಸ್ತು ತಂಡ ರಚಿಸಿಲ್ಲ. ಈ ಎಲ್ಲ ಕಾರಣಗಳಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಅಲ್ಲದೇ ಮರಳು ಅಕ್ರಮ ಸಾಗಾಣಿಕೆ ಕುರಿತು ಕಾನೂನು ಹೋರಾಟ ನಡೆಸುತ್ತಿರುವ ನನ್ನ ಮೇಲೆಯೇ ಜೀವ ಬೆದರಿಕೆ ಇದೆ. ಒಂದು ವೇಳೆ ನನ್ನ ಜೀವಕ್ಕೆ ಅಪಾಯವೇನಾದರೂ ಉಂಟಾದರೇ ಸರಕಾರವೇ ಹೊಣೆಯಾಗಬೇಕಾಗುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next