Advertisement
ಬೈಕಾಡಿಯ ಮುತ್ತಪ್ಪ ಯಾನೆ ಸುರೇಶ್ ಬಳೆಗಾರ (36), ಆತನ ಸಹೋದರ ನಾಗರಾಜ ಬಳೆಗಾರ (33), ಮೈಸೂರಿನ ಶೇಖ್ ರಿಯಾಝ್ ಅಹಮ್ಮದ್(33) ಮತ್ತು ಕೊಪ್ಪಳ ಗಂಗಾವತಿಯ ಶರಣಪ್ಪ ಅಮರಾಪುರ್(33)ಅವ ರನ್ನು ದೋಷಿಗಳೆಂದು ಘೋಷಿಸಲಾಗಿದ್ದು,ಇವರೆಲ್ಲರೂ ಸದ್ಯ ಜೈಲಿನಲ್ಲಿದ್ದಾರೆ.ಇನ್ನೋರ್ವ ಆರೋಪಿ ಉಡುಪಿ ಕುಕ್ಕಿಕಟ್ಟೆಯ ರಾಘವೇಂದ್ರ ಜಾಮೀನಿ ನಲ್ಲಿ ಬಿಡುಗಡೆಗೊಂಡಿದ್ದ.
ರೌಡಿಶೀಟರ್ ಪಿಟ್ಟಿ ನಾಗೇಶ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.ಕೊಲೆ ಸಂಚು ರೂಪಿಸಿದ್ದ ಆರೋಪ ಹೊತ್ತಿದ್ದ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಸಂದರ್ಭ ದಲ್ಲಿ ಉದ್ಯಾವರದ ಬಳಿ ಕೊಲೆಗೀಡಾಗಿದ್ದ. ಚೂರಿಯಿಂದ ಕೊಲೆ
ನಾಲ್ವರು ಆರೋಪಿಗಳು ಜೈಲಿನಲ್ಲಿ ಇತರ ಕೈದಿಗಳ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದರು. ಇದನ್ನು ವಿನೋದ್ ಶೆಟ್ಟಿಗಾರ್ ತಡೆದಿದ್ದ. ಈ ಕಾರಣಕ್ಕೆ ಜೈಲಿನಲ್ಲಿ ಗಲಾಟೆಯಾಗುತ್ತಿತ್ತು. 2011ರ ಜ.14ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕಾರಾಗೃಹದ 1ನೇ ಬ್ಯಾರಕ್ನ ಹೊರಗಡೆ ಕುಳಿತಿದ್ದ ವಿನೋದ್ ಶೆಟ್ಟಿಗಾರ್ನ ಮೇಲೆ ಚೂರಿಯಿಂದ ಯದ್ವಾತದ್ವಾ ಇರಿದಿದ್ದರು.ತಡೆಯಲು ಬಂದಿದ್ದ ಜೈಲಿನ ಸಿಬಂದಿಗೂ ಇರಿ ಯಲಾಗಿತ್ತು.ವಿನೋದ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದ.ಅಂದಿನ ಬ್ರಹ್ಮಾವರ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
Related Articles
Advertisement
ಶೌಚಾಲಯದಲ್ಲಿ ಸಿಕ್ಕಿತ್ತು 3 ಚೂರಿ
ಕೊಲೆ ನಡೆದ ಹಿಂದಿನ ದಿನ ಒಬ್ಬ ಆರೋಪಿಯನ್ನು ಕಾರ್ಕಳದ ನ್ಯಾಯಾ ಲಯಕ್ಕೆ ಹಾಜರುಪಡಿಸ ಲಾಗಿತ್ತು.ಈ ಸಂದರ್ಭ ಶೌಚಾಲಯದಲ್ಲಿ ಪೂರ್ವ ನಿಯೋಜಿತದಂತೆ 3 ಚೂರಿಗಳನ್ನು ತಂದಿಡಲಾಗಿತ್ತು.ಆತ ಕಾರಾಗೃಹಕ್ಕೆ ವಾಪಸಾಗುವಾಗ ಚೂರಿಗಳನ್ನು ಕೊಂಡೊಯ್ದಿದ್ದ.ಇದು ಕಾರಾಗೃಹ ಸಿಬಂದಿಯ ಗಮನಕ್ಕೆ ಬಂದಿರಲಿಲ್ಲ.ಅಂದು ರಾತ್ರಿಯೇ ಆರೋಪಿಗಳು ಕೊಲೆಗೆ ಯೋಜನೆ ರೂಪಿಸಿದ್ದರು.