Advertisement

ದಮನಕಾರಿಗಳನ್ನು ಕಿತ್ತೂಗೆಯಿರಿ:ಮೋದಿಗೆ ಕುಸ್ತಿಪಟುಗಳ ಒತ್ತಾಯ

11:49 PM Mar 19, 2024 | Team Udayavani |

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಆರೋಪಿ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರಂಥ ದಮನಕಾರಿಗಳನ್ನು ಕಿತ್ತೂಗೆಯಲು ಏನಾದರೂ ಕ್ರಮ ಕೈಗೊಳ್ಳಿ ಎಂದು ಭಾರತದ ಸ್ಟಾರ್‌ ಕುಸ್ತಿಪಟುಗಳಾದ ವಿನೇಶ್‌ ಫೊಗಾಟ್‌ ಮತ್ತು ಸಾಕ್ಷಿ ಮಲಿಕ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

Advertisement

ಭಾರತೀಯ ಒಲಿಂಪಿಕ್‌ ಸಂಸ್ಥೆಯು (ಐಒಎ), ಕುಸ್ತಿಯ ಆಡಳಿತ ನಿಯಂತ್ರಣವನ್ನು ಮತ್ತೆ ವಿವಾದಿತ ಭಾರತೀಯ ಕುಸ್ತಿ ಪ್ರಾಧಿಕಾರಕ್ಕೆ ನೀಡಿದೆ. ಐಒಎಯ ಈ ನಡೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ವಿನೇಶ್‌ ಮತ್ತು ಸಾಕ್ಷಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೋದಿಯವರನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿನೇಶ್‌ ಮತ್ತು ಸಾಕ್ಷಿ, “ಪ್ರಧಾನಿ ಒಬ್ಬರು ಸ್ಪಿನ್‌ ಮಾಸ್ಟರ್‌. ತನ್ನ ಎದುರಾಳಿಗಳಿಗೆ ತಿರುಗೇಟು ನೀಡುವಾಗ ನಾರಿ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ನರೇಂದ್ರ ಮೋದಿಜಿ, ನಿಜವಾದ ನಾರಿ ಶಕ್ತಿ ಬಗ್ಗೆ ನಮಗೆ ತಿಳಿಸಿಕೊಡಿ’ ಎಂದು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next