Advertisement

ಯಾರದೋ ಪ್ರತೀಕಾರಕ್ಕಾಗಿ ತನಿಖಾ ಸಂಸ್ಥೆಗಳಿಂದ ನಾಟಕ ನಡೆಯುತ್ತಿದೆ: ಕಾರ್ತಿ ಚಿದಂಬರಂ

10:36 AM Aug 23, 2019 | keerthan |

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಪಿ ಚಿದಂಬರಂ ಅವರನ್ನು ಬುಧವಾರ ರಾತ್ರಿ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಐಎನ್‌ ಎಕ್ಸ್‌ ಮೀಡೀಯಾ ಪ್ರಕರಣಕ್ಕೆ ಚಿದಂಬರಂ ಅವರನ್ನು ಬಂಧಿಸಿರುವುದನ್ನು ಖಂಡಿಸಿರುವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಇದು ರಾಜಕೀಯ ದುರುದ್ದೇಶ ಪೂರಿತ ಕೃತ್ಯ ಎಂದಿದ್ದಾರೆ.

Advertisement

ಇದು ಯಾರದೋ ಪ್ರತಿಕಾರಕ್ಕಾಗಿ ತನಿಖಾ ಸಂಸ್ಥೆಗಳು ನಾಟಕ ಮಾಡುತ್ತಿದೆ. ಅವರ ಹೆಸರಲ್ಲಿ ಯಾವುದೇ ಚಾರ್ಜ್‌ ಶೀಟ್‌ ದಾಖಲಾಗಿಲ್ಲ. ಚಿದಂಬರಂ ಮತ್ತು ಕಾಂಗ್ರೆಸ್‌ ಪಕ್ಷದ ಇಮೇಜ್‌ ಅನ್ನು ಹಾಳು ಮಾಡಲು ಈ ರೀತಿ ಮಾಡಲಾಗಿದೆ ಎಂದು ಕಾರ್ತಿ ಹೇಳಿದ್ದಾರೆ.

ಇದು ಪ್ರತೀಕಾರದ ನಡೆ ಎಂದಿರುವ ಕಾರ್ತಿ ಚಿದಂಬರಂ, ಇದರ ವಿರುದ್ಧ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next