Advertisement

ಗ್ರಾಮಸ್ಥರೇ ಸೇರಿ ನಕ್ಸಲನ ಹತ್ಯೆ ಮಾಡಿದರು

10:13 AM Jan 27, 2020 | Team Udayavani |

ಮಾಲ್ಕಂಗಿರಿ: ಒಡಿಶಾದ ಜಂತುರಾಯ್‌ ಜಿಲ್ಲೆಯಲ್ಲಿ ಓರ್ವ ನಕ್ಸಲನನ್ನು ಗ್ರಾಮಸ್ಥರೇ ಹತ್ಯೆಗೈದಿದ್ದಾರೆ. ಇಬ್ಬರು ನಕ್ಸಲರು ಹಳ್ಳಿಗೆ ಬಂದು ಗಣರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಬೇಕು ಎಂದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದು, ಅವರ ಬೆದರಿಕೆಗೆ ಮಣಿಯದೇ ಇದ್ದಾಗ ಗುಂಡಿನ ದಾಳಿಗೆ ಮುಂದಾದರು. ಆ ವೇಳೆ ಗ್ರಾಮಸ್ಥರು ಸಾಂಪ್ರದಾಯಿಕ ಆಯುಧಗಳನ್ನು ಹಿಡಿದು ನಕ್ಸಲರನ್ನು ಓಡಿಸಲು ಮುಂದಾದರು. ಆಗ ಗ್ರಾಮಸ್ಥರು ತೂರಿದ ಕಲ್ಲು ಮತ್ತು ಆಯುಧಗಳಿಂದ ಒಬ್ಬ ನಕ್ಸಲ್‌ ಸ್ಥಳದಲ್ಲೇ ಮೃತಪಟ್ಟರೆ, ಮತ್ತೂಬ್ಬ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next