Advertisement

ತಹಶೀಲ್ದಾರರ ಗ್ರಾಮ ವಾಸ್ತವ್ಯಕ್ಕೆ ಗ್ರಾಮಸ್ಥರೇ ಬರಲಿಲ್ಲ!

01:44 PM Feb 20, 2021 | Team Udayavani |

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಮಟ್ಟಿಯಲ್ಲಿ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಗ್ರಾಮಸ್ಥರೇ ಬರದೆ ನೀರಸ ಪ್ರತಿಕ್ರಿಯೆ ತೋರಿದ ಘಟನೆ ನಡೆದಿದೆ.

Advertisement

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಹಟ್ಟಿ ಗ್ರಾಮದಲ್ಲಿ ತಹಶೀಲ್ದಾರ ಜಿ.ಎಂ.ಕುಲಕರ್ಣಿ ಮತ್ತು ಇತರೆ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶನಿವಾರ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬೊಮ್ಮನಜೋಗಿ ಹಳ್ಳಿ ಮಕ್ಕಳಿಗೆ ಮೇಸ್ಟ್ರಾದ ವಿಜಯಪುರ ಜಿಲ್ಲಾಧಿಕಾರಿ

ಆದರೆ ತಹಶೀಲ್ದಾರರ ಗ್ರಾಮ ವಾಸ್ತವ್ಯಕ್ಕೆ ಸಾರ್ವಜನಿಕರು ಯಾರೂ ಬಾರದೆ ಕಾರ್ಯಕ್ರಮ ಸಭಾಂಗಣ ಬಿಕೋ ಎನ್ನುತ್ತಿರುವ ದೃಶ್ಯ ಕಂಡುಬಂತು.

ಕಾರ್ಯಕ್ರಮಕ್ಕೆ ಜನರೇ ಬಾರದ ಕಾರಣ ಅಧಿಕಾರಿಗಳು ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಗ್ರಾಮದಲ್ಲಿ ಸಮಸ್ಯೆಗಳೇ ಇಲ್ಲವೇ ಅಥವಾ ಆಡಳಿತ ವ್ಯವಸ್ಥೆ ಬಗ್ಗೆ ಜನರಿಗೆ ಭರವಸೆ ಇಲ್ಲವೇ ಎಂಬ ಅನುಮಾನಗಳಿಗೆ ಬೇವಿನಮಟ್ಟಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಎಡೆಮಾಡಿಕೊಟ್ಟಿತು.

Advertisement

ಇದನ್ನೂ ಓದಿ: ರಾಮ ಜನರ ಧಾರ್ಮಿಕ ನಂಬಿಕೆ, ನಾನೂ ರಾಮಮಂದಿರ ಕಟ್ಟಿಸುತ್ತಿದ್ದೇನೆ: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next