Advertisement

ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

02:38 PM Dec 02, 2019 | Team Udayavani |

ದೋಟಿಹಾಳ: ಜೆ. ರಾಪುಂರಜುಮಲಾಪುರ ಸಂಪರ್ಕ ರಸ್ತೆ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೆ. ರಾಪುಂರ ಗ್ರಾಮದಿಂದ ಜುಮಲಾಪುರ ಗ್ರಾಮವನ್ನು ಸಂಪರ್ಕ ರಸ್ತೆ ಹದಗೆಟ್ಟಿದ್ದು ವರ್ಷಗಳೆ ಕಳೆದರು ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಕಳೆದ 10 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಕಂಡಿತು. ಈ ಪ್ರದೇಶ ಕಪ್ಪುಮಣ್ಣಿನ ಪ್ರದೇಶ ಆಗಿರುವುದರಿಂದ ರಸ್ತೆ ಗಟ್ಟಿಯಾಗಿಲ್ಲ. ರಸ್ತೆಯ ಮೇಲ್ಭಾಗದಲ್ಲಿನ ಡಾಂಬರ್‌ ಕಿತ್ತು ಹೋಗಿದೆ. ಬಹುತೇಕ ಕಡೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ.

Advertisement

ರೈತರ ಎತ್ತಿನ ಬಂಡಿ ಸೇರಿದಂತೆ ವಿವಿಧ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹೆಚ್ಚಾಗಿ ಈ ಭಾಗದ ರೈತರು ತಮ್ಮ ತಮ್ಮ ಹೊಲಗಳಿಗೆ ಹೋಗಲು ಈ ರಸ್ತೆಯನ್ನು ಬಳಸುತ್ತಾರೆ. ಹೀಗಾಗಿ ಅಭಿವೃದ್ಧಿಯಾಗಬೇಕು. ಇಲ್ಲದ್ದಿದರೆ ಮಳೆ ಬಂದರೆ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next