Advertisement

‘ತ್ರಿವಿಕ್ರಮ’ನಿಗೆ ಜೈ ಎಂದ ಪ್ರೇಕ್ಷಕ

11:45 AM Jun 28, 2022 | Team Udayavani |

ರವಿಚಂದ್ರನ್‌ ಪುತ್ರ ವಿಕ್ರಂ ನಾಯಕರಾಗಿರುವ “ತ್ರಿವಿಕ್ರಮ’ ಸಿನಿಮಾ ಜೂನ್‌ 24 ರಂದು ಬಿಡುಗಡೆಯಾಗಿದ್ದು, ಈಗ ನಿರ್ಮಾಪಕರ ಮೊಗದಲ್ಲಿ ನಗುಮೂಡಿಸಿದೆ. ಈ ಮೂಲಕ ಮೊದಲ ಚಿತ್ರದಲ್ಲೇ ನಾಯಕ ವಿಕ್ರಂ ಖುಷಿಯಾಗಿದ್ದಾರೆ. ಚಿತ್ರ ಚೆನ್ನಾಗಿ ಹೋಗುತ್ತಿರುವ ಖುಷಿಯನ್ನು ಚಿತ್ರತಂಡ ಸೋಮವಾರ ಮಾಧ್ಯಮ ಮುಂದೆ ಬಂದು ಹಂಚಿಕೊಂಡಿತು.

Advertisement

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಹನಾ ಮೂರ್ತಿ,”ನಮ್ಮ ತ್ರಿವಿಕ್ರಮ ಸಿನಿಮಾಕ್ಕೆ ಎಲ್ಲರೂ ಕೊಟ್ಟ ಪ್ರೋತ್ಸಾಹದಿಂದ ಇಂದು ನಮ್ಮ ಸಿನಿಮಾ ಸದ್ದು ಮಾಡುತ್ತಿದೆ. ಶುಕ್ರವಾರ, ಶನಿವಾರ ಕ್ಕೆ ಹೋಲಿಸಿದರೆ ಭಾನುವಾರ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ಜೊತೆಯಲ್ಲಿ ಚಿತ್ರ ಹಣ ಗಳಿಕೆಯಲ್ಲೂ ಏರಿಕೆ ಕಂಡಿದೆ. ಚಿತ್ರದ ಗೆಲುವಿನತ್ತ ನಾವು ಹೋಗುತ್ತಿದ್ದೇವೆ ಎನ್ನುವ ಖುಷಿ ಇದೆ. ಎಲ್ಲಾ ಕಡೆ ಚಿತ್ರ ಹೌಸ್‌ ಫ‌ುಲ್‌ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಚಿತ್ರವನ್ನು ನೋಡಲು ಹೆಣ್ಣು ಮಕ್ಕಳು, ಮಕ್ಕಳು ಎಲ್ಲರೂ ಬರುತ್ತಿದ್ದಾರೆ. ಕುಟುಂಬ ಸಮೇತ ಬಂದು ಚಿತ್ರ ನೋಡುವ ಮೂಲಕ ಫ್ಯಾಮಿಲಿ ಎಂಟರ್‌ಟೈನರ್‌ ಆಗಿ ಹೊರಹೊಮ್ಮಿದೆ’ ಎಂದರು.

ನಿರ್ಮಾಪಕ ಸೋಮಣ್ಣ ಕೂಡಾ “ತ್ರಿವಿಕ್ರಮ’ ಉತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ. “ಸೋಮಣ್ಣ ಟಾಕೀಸ್‌ ಅನ್ನುವ ಸಂಸ್ಥೆಯಿಂದ ತಯಾರಾದ ಮೊದಲ ಚಿತ್ರ ತ್ರಿವಿಕ್ರಮ. ಇದಕ್ಕೆ ಒಳ್ಳೆಯ ಸಹಕಾರ ದೊರೆತಿದೆ. ಜನರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ನಾವು ಊಹಿಸಿದಕ್ಕಿಂತ ಜಾಸ್ತಿ ಗಳಿಕೆಯನ್ನು ಕಂಡಿದೆ. ಎಲ್ಲಾ ಕೇಂದ್ರಗಳಲ್ಲೂ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ದಾವಣಗೆರೆ, ಬಳ್ಳಾರಿ ಹಾಗೂ ತುಮಕೂರಿನ ಗಾಯತ್ರಿ ಚಿತ್ರಮಂದಿರ, ಬೆಂಗಳೂರಿನ ಮಾಲ್‌ ಗಳಲ್ಲಿ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿವೆ. ಭಾನುವಾರ ಮೈಸೂರು ಸೇರಿದಂತೆ ಹಲವು ಮಾಲ್‌ಗ‌ಳಲ್ಲಿ ಚಿತ್ರಪ್ರದರ್ಶನಗಳ ಸಂಖ್ಯೆಯನ್ನು ಏರಿಸಲಾಗಿದೆ. ಮುಖ್ಯವಾಗಿ ಫ್ಯಾಮಿಲಿ ಬರುತ್ತಿವೆ.  ಇನ್ನು ಡಾಲಿ ಧನಂಜಯ್‌, ಕಿಚ್ಚ ಸುದೀಪ್‌ ಅವರು ಸದ್ಯದಲ್ಲೇ ಚಿತ್ರಗಳನ್ನು ವೀಕ್ಷಿಸಲಿದ್ದಾರೆ’ ಎಂದರು.

ಇದನ್ನೂ ಓದಿ:ಮತ್ತೆ ನಿರ್ದೇಶನದತ್ತ ಅರ್ಜುನ್‌ ಸರ್ಜಾ: ಪುತ್ರಿಯ ಹೊಸ ಚಿತ್ರಕ್ಕೆ ನಿರ್ದೇಶನ

ನಾಯಕ ವಿಕ್ರಂ ಚಿತ್ರ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿರುವುದರಿಂದ ಖುಷಿಯಾಗಿದ್ದಾರೆ.  “ನನಗೆ ಒಂದು ಶೋ ಹೌಸ್‌ಫ‌ುಲ್‌ ಆದರೆ ಸಾಕೆಂಬ ಆಸೆ ಇತ್ತು. ಆದರೆ, ಈಗ ಜನರು ಪ್ರೀತಿಯಿಂದ ಅಪ್ಪಿಕೊಂಡ ಪರಿಣಾಮ ಮೂರು ದಿನ ಕೂಡಾ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದೆ. ಹಾಗಂತ ಈ ಯಶಸ್ಸನ್ನು ನಾನು ತಲೆಗೇರಿಸಿಕೊಂಡಿಲ್ಲ. ಮುಂದೆ ಸಾಧನೆ ಮಾಡೋದು ಸಾಕಷ್ಟು ಇದೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next