Advertisement

ಭಾರತ ‘ಎ’ಗೆ ವಿಕ್ರಮ್‌ ಬ್ಯಾಟಿಂಗ್‌ ಕೋಚ್ ತಲೆಯೆತ್ತಿದ ಸ್ವಹಿತಾಸಕ್ತಿ

02:02 AM Feb 11, 2019 | Team Udayavani |

ಮುಂಬೈ: ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವಿಕ್ರಮ್‌ ರಾಥೋಡ್‌, ಭಾರತ ಎ ಮತ್ತು 19 ವಯೋಮಿತಿ ಯೊಳಗಿನ ಬ್ಯಾಟಿಂಗ್‌ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಸ್ವಹಿತಾಸಕ್ತಿ ವಿವಾದ ತಲೆ ಯೆತ್ತಿದೆ.

Advertisement

ಭಾರತ 19 ವಯೋಮಿತಿ ಯೊಳಗಿನ ತಂಡದ ಆಯ್ಕೆಗಾರ ಆಶೀಷ್‌ ಕಪೂರ್‌ ಹಾಗೂ ವಿಕ್ರಮ್‌ ರಾಥೋಡ್‌ ಸಮೀಪದ ಸಂಬಂಧಿಗಳು. ಬಿಸಿಸಿಐ ನೂತನ ನಿಯಮದ ಪ್ರಕಾರ, ಇದು ಸ್ವಹಿತಾಸಕ್ತಿ ಎನಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಬಿಸಿಸಿಐ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಸಾಬಾ ಕರೀಂ, 19 ವಯೋಮಿತಿ ಮತ್ತು ಎ ತಂಡದ ಮುಖ್ಯ ತರಬೇತುದಾರ ರಾಹುಲ್‌ ದ್ರಾವಿಡ್‌ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ರಾಹುಲ್‌ ದ್ರಾವಿಡ್‌ ಕೂಡ, ಸ್ವಹಿತಾಸಕ್ತಿ ವಿವಾದದ ಕಾರಣ; ಡೆಲ್ಲಿ ಡೇರ್‌ ಡೆವಿಲ್ಸ್‌ ಐಪಿಎಲ್‌ ತಂಡದ ತರಬೇತುದಾರ ಹುದ್ದೆಯಿಂದ ಕೆಳಗಿಳಿದಿದ್ದರು. ಇದನ್ನು ಗಮನಿಸಿದರೆ ವಿಕ್ರಮ್‌ ರಾಥೋಡ್‌ ಆಯ್ಕೆ, ಬಿಸಿಸಿಐ ಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next