Advertisement

ಉಡುಪಿ ಧರ್ಮಪ್ರಾಂತಕ್ಕೆ ನೂತನ ವಿಕಾರ್‌ ಜನರಲ್‌

11:52 PM Apr 01, 2023 | Team Udayavani |

ಉಡುಪಿ: ಉಡುಪಿ ಧರ್ಮಪ್ರಾಂತದ ನೂತನ ವಿಕಾರ್‌ ಜನರಲ್‌ ಆಗಿ ರೆ|ಫಾ| ಫ‌ರ್ಡಿನಾಂಡ್‌ ಗೊನ್ಸಾಲ್ವಿಸ್‌ ಅವರನ್ನು ಧರ್ಮಾಧ್ಯಕ್ಷ ರೆ|ಫಾ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ನೇಮಕ ಮಾಡಿದ್ದಾರೆ.

Advertisement

ಧರ್ಮಾಧ್ಯಕ್ಷರ ನಿವಾಸದಲ್ಲಿ ಶನಿವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷರು ಪ್ರಾರ್ಥನೆ ಸಲ್ಲಿಸಿ ಪ್ರತಿಜ್ಞಾವಿಧಿ ಬೋಧಿಸಿದರು.

ಧರ್ಮಪ್ರಾಂತದ ಕುಲಪತಿ ರೆ|ಫಾ|ಡಾ| ರೋಶನ್‌ ಡಿ’ಸೋಜಾ, ಉಡುಪಿ ಶೋಕಮಾತಾ ಚರ್ಚ್‌ನ ಪ್ರಧಾನ ಧರ್ಮಗುರು ರೆ|ಫಾ| ಚಾರ್ಲ್ಸ್‌ ಮಿನೇಜಸ್‌, ರೆ|ಫಾ| ಸ್ಟೀಫ‌ನ್‌ ಡಿ’ಸೋಜಾ, ಉಜ್ವಾಡ್‌ ಪಾಕ್ಷಿಕದ ಸಂಪಾದಕ ರೆ|ಫಾ| ರೊಯ್ಸನ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು. ಪ್ರಸ್ತುತ ಪಾಂಗಾಳ-ಶಂಕರಪುರ ಸಂತ ಯೋಹಾನ್ನರ ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಫ‌ರ್ಡಿನಾಂಡ್‌ ಅವರು ಕೆಥೋಲಿಕ್‌ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾಗಿ, ಧರ್ಮಪ್ರಾಂತದ ಶ್ರೀಸಾಮಾನ್ಯ ಆಯೋಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next