Advertisement

Vijaypura: ಸತತ 4ನೇ ಬಾರಿ ಸ್ಪರ್ಧೆಗೆ ಜಿಗಜಿಣಗಿ ಉತ್ಸುಕ

11:29 PM Jan 24, 2024 | Team Udayavani |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾದ ಬಸವನಾಡು ವಿಜಯಪುರ ಲೋಕಸಭೆ ಕ್ಷೇತ್ರ ಸತತ ಮೂರು ಸಲದಿಂದ ಬಿಜೆಪಿಯ ವಶದಲ್ಲಿದೆ. ಹಿಂದೆ ಇಲ್ಲಿ ಆರು ಬಾರಿ ಕಾಂಗ್ರೆಸ್‌ ಹಾಗೂ ಎರಡು ಸಲ ಜನತಾ ಪರಿವಾರ ಗೆದ್ದಿದ್ದು, ಒಂದು ರೀತಿ ಇದು ಜನತಾ ಪರಿವಾರದ ಭದ್ರ ನೆಲೆ ಎಂದರೂ ತಪ್ಪಲ್ಲ. ಯಾಕೆಂದರೆ, ಹಾಲಿ ಸಂಸದ ಹಾಗೂ ಕಳೆದ ಮೂರು ಅವಧಿಯಲ್ಲಿ ಗೆದ್ದಿರುವ ಬಿಜೆಪಿಯ ರಮೇಶ್‌ ಜಿಗಜಿಣಗಿ ಮೂಲತಃ ಜನತಾ ಪರಿವಾರದವರೇ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಪಳಗಿದವರು.

Advertisement

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯಪುರ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ತವರಿಗೆ ಮರಳಿದ್ದರು. ಈ ಸಲವೂ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈತ್ರಿಯ ಕಾರಣದಿಂದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಳಿಯಾಗಿದ್ದ ಜೆಡಿಎಸ್‌ ಈ ಬಾರಿ ಮೈತ್ರಿ ಪಕ್ಷವಾಗಿದೆ. ಜತೆಗೆ ಪಕ್ಷ ಬಲಿಷ್ಠವಾಗಿಲ್ಲದ ಕಾರಣ ಸ್ಥಾನ ಹಂಚಿಕೆ ಸಂದರ್ಭ ವಿಜಯಪುರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಇದು ಪ್ಲಸ್‌ ಪಾಯಿಂಟ್‌ ಆಗಲಿದೆ.

ಚುನಾವಣೆ ಎದುರಿಸುವಲ್ಲಿ ಚತುರತೆ, ಪಕ್ಷದಲ್ಲಿ ಹಿರಿತನ, ಜಾತಿ ಸಮೀಕರಣ ಹೀಗೆ ಹಲವು ಲೆಕ್ಕಾಚಾರದಲ್ಲಿ ಕೇಸರಿ ಪಾಳೆಯ ಮತ್ತೂಮ್ಮೆ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದರ ಹೊರತಾ ಗಿಯೂ ಪಕ್ಷ ಟಿಕೆಟ್‌ ನೀಡದಿದ್ದರೂ ಬೇಸರಿಸಿಕೊಳ್ಳದೆ ಮನೆಯಲ್ಲಿ ನನ್ನ ಪಾಡಿಗೆ ನಾನಿರುತ್ತೇನೆ ಎನ್ನುವ ಮೂಲಕ ದಾಳವನ್ನೂ ಉರುಳಿಸುತ್ತಲೇ ಇದ್ದಾರೆ. ಆದರೆ ಜಿಲ್ಲೆಯ ಹಿರಿಯ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಜತೆ ವೈಮನಸ್ಸು ಹೊಂದಿ ದ್ದಾರೆ ಎಂಬುದು ಗಮನೀಯ.

ಇನ್ನು ಸಂಘ ಪರಿವಾರದ ಹಿನ್ನೆಲೆಯ ಡಾ| ಬಾಬುರಾಜೇಂದ್ರ ನಾಯಕ ಟಿಕೆಟ್‌ ಸಿಗುವ ಭರವಸೆಯಲ್ಲಿ ಸಮಾಜಸೇವೆಯ ಮೂಲಕ ಕ್ಷೇತ್ರದ ಜನರೊಂದಿಗೆ ಬೆರೆಯಲು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಯಾಗಿ ಪೊಲೀಸ್‌ ಅಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಬಂದಿರುವ ಮಹೇಂದ್ರ ನಾಯಕ ಕೂಡ ಲೋಕಸಭೆ ಚುನಾವಣೆಗೆ ಕಮಲ ಪಕ್ಷದ ಟಿಕೆಟ್‌ ಆಕಾಂಕ್ಷಿ. ಆದರೆ ನೆರೆಯ ಕಲಬುರ್ಗಿ ಕ್ಷೇತ್ರದಲ್ಲಿ ಬಂಜಾರಾ ಸಮುದಾಯಕ್ಕೆ ಸೇರಿದ ಡಾ| ಉಮೇಶ ಜಾಧವ್‌ ಬಿಜೆಪಿ ಹಾಲಿ ಸಂಸದ. ಪಕ್ಷ ಮತ್ತೂಮ್ಮೆ ಅವರಿಗೆ ಮಣೆ ಹಾಕಿದರೆ ಬಂಜಾರಾ ಸಮು ದಾಯದ  ಇವರಿಬ್ಬರ ಪ್ರಯತ್ನ ಫಲಿಸುವುದು ಕಷ್ಟ.

Advertisement

ಹಿಂದಿನ ಎರಡೂವರೆ ದಶಕದ ಚುನಾವಣೆ ಅವಲೋಕಿಸಿದರೆ ಬಿಜೆಪಿ ಭದ್ರಕೋಟೆ ಬೇಧಿಸುವುದು ಕಾಂಗ್ರೆಸ್‌ಗೆ ಈಗಲೂ ಸುಲಭವಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವಿದೆ. ಪ್ರಭಾವಿ ನಾಯಕರಾಗಿದ್ದು, ಸಚಿವರಾಗಿರುವ ಎಂ.ಬಿ.ಪಾಟೀಲ್‌ ಹಾಗೂ ಶಿವಾನಂದ ಪಾಟೀಲ್‌ ಸಹಿತ  ಆರು ಮಂದಿ ಪಕ್ಷದ ಶಾಸಕರಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕೈಮೇಲಾಗುವುದು ಖಚಿತ ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು.

ಈ ಬಾರಿ ಬಿಜೆಪಿಗೆ ಕಾಂಗ್ರೆಸ್‌ ನೇರ ಎದುರಾಳಿ ಆಗಲಿದ್ದು, ಕೈ ಪಾಳೆಯ ದಿಂದ ಕೆಪಿಸಿಸಿಗೆ ಕಳಿಸಿರುವ ಪಟ್ಟಿಯಂತೆ 10 ಸ್ಪರ್ಧಾಕಾಂಕ್ಷಿಗಳಿದ್ದಾರೆ. ರಮೇಶ ಜಿಗಜಿಣಗಿ ವಿರುದ್ಧ ಸತತ ಎರಡು ಸೋಲು ಸಹಿತ ಮೂರು ಬಾರಿ ಪರಾಭವಗೊಂಡಿರುವ ಮೇಲ್ಮನೆ ಶಾಸಕ ಪ್ರಕಾಶ ರಾಠೊಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಆರ್‌.ಆಲಗೂರು, ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೊಡ, ಬಲರಾಮ ನಾಯಕ, ಕಾಂತಾ ನಾಯಕ, ಡಿ.ಎಲ್‌.ಚೌವ್ಹಾಣ್‌, ಮಾಜಿ ಅಧಿಕಾರಿ ರಾಜಶೇಖರ ಯಡಳ್ಳಿ ಹಾಗೂ ಮಾಜಿ ಶಾಸಕ ಮನೋಹರ ಐನಾಪುರ ಸಹಿತ 10 ಮಂದಿ  ಆಕಾಂಕ್ಷಿಗಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿಯಾಗಿ ಜಿಗಜಿಣಗಿ ವಿರುದ್ಧ ಸ್ಪಧಿìಸಿ ಸೋತಿದ್ದ ಸುನೀತಾ ಚೌವ್ಹಾಣ್‌ ಹಾಗೂ ಪ್ರಕಾಶ ರಾಠೊಡ ಇಬ್ಬರೂ ಬಂಜಾರಾ ಸಮುದಾಯದವರು. ಹೀಗಾಗಿ ಹೊಸಮುಖಕ್ಕೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಬಂಜಾರಾ ಸಮುದಾಯದ ಟಿಕೆಟ್‌ ಆಕಾಂಕ್ಷಿಗಳಿಂದ ಕೇಳಿಬಂದಿದೆ.

ಈ ಪಟ್ಟಿಯಲ್ಲಿ ಕಾಂತಾ ನಾಯಕ ಮಹಿಳಾ ಕೋಟದಲ್ಲಿ ಕೊಡಿ ಎನ್ನುತ್ತಿ ದ್ದಾರೆ. ಬಲರಾಮ ನಾಯಕ, ಅರ್ಜುನ ರಾಠೊಡ, ಡಿ.ಎಲ್‌.ಚೌವ್ಹಾಣ್‌ ನಮಗೊಂದು ಅವಕಾಶ ಕೊಟ್ಟು ನೋಡಿ ಎಂಬ ಬೇಡಿಕೆ ಸಲ್ಲಿಸಿದ್ದಾರೆ.  ಹೊರಗಿನ ಜಿಲ್ಲೆಯವರೂ ಮೀಸಲು ಕ್ಷೇತ್ರದಿಂದ ಲೋಕಸಭೆ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ.

 ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next