Advertisement

ವಿಜಯೇಂದ್ರ ಸೂಪರ್‌ ಸಿಎಂ ಅಲ್ಲ: ಸೋಮಣ್ಣ

11:28 PM Feb 25, 2020 | Lakshmi GovindaRaj |

ಬಳ್ಳಾರಿ: ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್‌ ಸಿಎಂ ರೀತಿ ವರ್ತಿಸುತ್ತಿದ್ದಾರೆ ಎಂಬುದೆಲ್ಲ ಸುಳ್ಳು. ಇವೆಲ್ಲ ಕೇವಲ ಊಹಾಪೋಹ ಎಂದು ವಸತಿ ಸಚಿವ ವಿ. ಸೋಮಣ್ಣ ಸ್ಪಷ್ಟ ಪಡಿಸಿದರು. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, 42 ವರ್ಷದಿಂದ ರಾಜಕೀಯದಲ್ಲಿದ್ದು, ಏಳು ಮುಖ್ಯ ಮಂತ್ರಿಗಳನ್ನು ನೋಡಿದ್ದೇನೆ. ಸಾಕಷ್ಟು ರಂಪ ಮಾಡಿದ್ದೇನೆ. ಸಿಎಂ ಬದಲಾ ಗೋದೂ ನೋಡಿದ್ದೀನಿ. ಈ ಆಧಾರದಲ್ಲಿ ಹೇಳ್ತೇನೆ, ಸರ್ಕಾರದಲ್ಲಿ ಸಿಎಂ ಪುತ್ರ ಹಸ್ತಕ್ಷೇಪ ಮಾಡ್ತಿಲ್ಲ.

Advertisement

ಯಡಿಯೂರಪ್ಪ ನವರಿಗೆ 78 ವರ್ಷವಾಗಿದ್ದರೂ ಅವರು ಸಾಕಷ್ಟು ಚುರುಕಾಗಿದ್ದಾರೆ. ಅವರ ಮೆದುಳು ಸಾಕಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರ ಉತ್ಸಾಹ ಇಂದಿಗೂ ಕುಗ್ಗಿಲ್ಲ. ಹೀಗಿರು ವಾಗ ಅವರು ತಮ್ಮ ಆಡಳಿತಕ್ಕೆ ಇನ್ನೊ ಬ್ಬರ ನೆರವು ಪಡೆಯುತ್ತಿದ್ದಾರೆ ಎಂಬುದು ಊಹಾಪೋಹ ಎಂದರು. ಯಡಿಯೂ ರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಎಂಬುದು ಇಂದಿಗೂ ನಿಜವಾದ ಮಾತು. ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಅವರಿರುವಾಗ ಯಾರೂ ಸೂಪರ್‌ ಸಿಎಂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next